More

    3 ಕೋಟಿ ರೂ. ವ್ಯವಹಾರ

    ಅಜ್ಜಂಪುರ: ಪಟ್ಟಣದ ಕನಕಶ್ರೀ ಪತ್ತಿನ ಸಹಕಾರ ಸಂಘ 7.11 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ.ಅಣ್ಣಯ್ಯ ತಿಳಿಸಿದರು. ಶುಕ್ರವಾರ ಕನಕಶ್ರೀ ಪತ್ತಿನ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘ 1,309 ಸದಸ್ಯರನ್ನು ಹೊಂದಿದ್ದು, 3 ಕೋಟಿ ವ್ಯವಹಾರ ನಡೆಸಿದೆ. 82.12 ಲಕ್ಷ ಸಾಲ ನೀಡಿದೆ ಎಂದು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಜಿ.ನಟರಾಜ್ ಮಾತನಾಡಿ, ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬೇಕು. ಇತರ ಸದಸ್ಯರು ಸಂಘದಲ್ಲಿ ಹೆಚ್ಚು ಠೇವಣಿ ಇರಿಸಬೇಕು. ಆ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts