More

    ಜಿಲ್ಲೆಯಲ್ಲಿ 291ಡೆಂಘೆ ಪ್ರಕರಣ

    ಅವಿನಾಶ್ ಜೈನಹಳ್ಳಿ ಮೈಸೂರು
    ಜಿಲ್ಲೆಯ ಜನತೆಯನ್ನು ಈ ವರ್ಷ ‘ಡೆಂಘೆ’ ಮಹಾಮಾರಿ ಕಾಡಲು ಶುರು ಮಾಡಿದ್ದು, ರಾಜ್ಯದಲ್ಲಿ ಡೆಂೆ ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳ ಪೈಕಿ ಮೈಸೂರು ಎರಡನೇ ಸ್ಥಾನದಲ್ಲಿದೆ.


    ಡೆಂೆಯಿಂದ ಬಳಲುತ್ತಿರುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲೇ ಹೆಚ್ಚಾಗಿದ್ದು, ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಜೂನ್ ತಿಂಗಳ ಅವಧಿಯಲ್ಲಿ 68, ಜುಲೈ ತಿಂಗಳಲ್ಲಿ ಇಲ್ಲಿಯವರೆಗೆ 49 ಪ್ರಕರಣ ದಾಖಲಾಗಿವೆ. ಜನವರಿ 1ರಿಂದ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 291ಕ್ಕೆ ಏರಿದೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ 3,070 ಜನರ ರಕ್ತಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ.


    2018ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಡೆಂೆ ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ 843 ಪ್ರಕರಣಗಳು ಪತ್ತೆಯಾಗಿದ್ದವು. ಇದೇ ಈವರೆಗಿನ ಜಿಲ್ಲೆಯ ದಾಖಲೆಯಾಗಿದೆ. 2021ರಲ್ಲಿ 182 ಪ್ರಕರಣಗಳು ಕಂಡುಬಂದಿದ್ದವು. 2022ರಲ್ಲಿ 789 ಡೆಂೆ ಪ್ರಕರಣ ವರದಿಯಾಗಿದ್ದವು. ಆ ವೇಳೆ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಯೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಪ್ರಸಕ್ತ ವರ್ಷ ಜೂನ್, ಜುಲೈ ತಿಂಗಳ 45 ದಿನಗಳ ಅವಧಿಯಲ್ಲೇ 117 ಪ್ರಕರಣ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.


    ಜೂನ್, ಜುಲೈನಲ್ಲೇ ಹೆಚ್ಚು:

    ಡಿಸೆಂಬರ್ ತಿಂಗಳಲ್ಲಿ ಕೊಂಚ ಮಳೆಯಾದ ಪರಿಣಾಮ ಜನವರಿಯಲ್ಲಿ ಹೆಚ್ಚು ಡೆಂೆ ಪ್ರಕರಣ ವರದಿಯಾಗಿವೆ. ಜನವರಿಯಲ್ಲಿ 30 ಜನರಿಗೆ ಕಾಣಿಸಿಕೊಂಡಿತ್ತು. ಬಳಿಕ ಪ್ರತಿ ತಿಂಗಳು ಸರಾಸರಿ 20 ರಿಂದ 25 ಪ್ರಕರಣಗಳು ವರದಿಯಾಗಿವೆ. ಬಳಿಕ ಮಳೆಯಾದ ಕಾರಣ ಜೂನ್, ಜುಲೈನಲ್ಲಿ ಪ್ರಕರಣ ಹೆಚ್ಚಾಗಿವೆ. ಮನೆ ಸುತ್ತಮುತ್ತ ಮಳೆ ನೀರು ಮಡುಗಟ್ಟಿ ನಿಂತು ಡೆಂೆ ಹರಡುವ ‘ಈಡೀಸ್’ ಸೊಳ್ಳೆಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗಿವೆ. ಮಳೆಗಾಲ ಇನ್ನೂ ಇರುವುದರಿಂದ ಡೆಂೆ ಕಾಟ ಮುಂದಿನ ಮೂರು ತಿಂಗಳ ಕಾಲ ಕಾಡಲಿದೆ. ಹಾಗಾಗಿ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.


    ಹುಣಸೂರು ಮತ್ತು ಮೈಸೂರು ನಗರದಲ್ಲಿಯೇ ಅಧಿಕ!

    ಈ ಬಾರಿ ಹುಣಸೂರು ತಾಲೂಕು ಮತ್ತು ಮೈಸೂರು ನಗರದಲ್ಲಿಯೇ ಹೆಚ್ಚಾಗಿ ಡೆಂೆ ಪ್ರಕರಣ ಕಂಡುಬಂದಿರುವುದು ವರದಿಯಾಗಿದೆ. ಹುಣಸೂರು ತಾಲೂಕಿನಲ್ಲಿ 3,070 ಜನರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 89 ಡೆಂೆ ಪ್ರಕರಣ ವರದಿಯಾಗಿವೆ. ಮೈಸೂರು ನಗರದಲ್ಲಿ 836 ಜನರ ರಕ್ತ ಮಾದರಿ ಪರೀಕ್ಷೆ ಪೈಕಿ 78 ಪ್ರಕರಣ ಕಂಡುಬಂದಿವೆ. ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲೂ ಡೆಂೆ ಪ್ರಕರಣ ವರದಿಯಾಗಿವೆ. ಈ ಹಿಂದಿನ ವರ್ಷಗಳಲ್ಲಿ ಹೆಚ್ಚಾಗಿ ಡೆಂೆ ಕಾಣಿಸಿಕೊಂಡಿದ್ದ ರಾಮಕೃಷ್ಣನಗರ, ಸರಸ್ವತಿಪುರಂ, ಜನತಾನಗರ, ಹೆಬ್ಬಾಳು, ಕುವೆಂಪುನಗರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದಾಗಿ ಈ ಬಾರಿ ಡೆಂೆ ನಿಯಂತ್ರಣಕ್ಕೆ ಬಂದಿರುವುದು ಸಮಾಧಾನಕರ ಸಂಗತಿಯಾಗಿದೆ. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ಅರಿವು ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಿದೆ.


    ತಾಲೂಕುವಾರು ಮಾಹಿತಿ:

    ಮೈಸೂರು ನಗರ ಮತ್ತು ಹುಣಸೂರು ಬಿಟ್ಟರೆ ಜುಲೈ 15ರ ವರೆಗಿನ ಮಾಹಿತಿ ಪ್ರಕಾರ ಮೈಸೂರು ತಾಲೂಕಿನಲ್ಲಿ 30, ತಿ.ನರಸೀಪುರದಲ್ಲಿ 9, ನಂಜನಗೂಡು 14, ಎಚ್.ಡಿ.ಕೋಟೆ 20, ಪಿರಿಯಾಪಟ್ಟಣ 12 ಹಾಗೂ ಕೆ.ಆರ್.ನಗರ ತಾಲೂಕಿನಲ್ಲಿ 28 ಡೆಂೆ ಪ್ರಕರಣ ಕಂಡುಬಂದಿವೆ. ಈ ಮೂಲಕ ಡೆಂೆ ಪ್ರಕರಣಗಳ ವರದಿಯಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ.

    ಮುನ್ನೆಚ್ಚರಿಕೆ ಕ್ರಮಗಳೇನು?:

    1. ಮಳೆ ನೀರು ಒಂದೇ ಕಡೆ ಸಂಗ್ರಹವಾಗಿದ್ದರೆ, ಸೊಳ್ಳೆಗಳ ಸಂತತಿ ಹೆಚ್ಚಾಗಲಿದೆ. ಹಾಗಾಗಿ, ಮಳೆ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು.
    2. ಹೂವಿನಕುಂಡ, ಬಿಸಾಡಿದ ಟಯರ್, ತೊಟ್ಟಿ, ನೀರಿನ ಬಾಟಲಿಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಅಂಥ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಶುಚಿಗೊಳಿಸಬೇಕು.
    3. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆಗಳ ತಾಣಗಳನ್ನು ಗುರುತಿಸಿ ನಾಶಪಡಿಸಬೇಕು.
    4. * ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಹೆಚ್ಚು ದಿನಗಳ ಕಾಲ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಇಂತಹ ಸ್ಥಳಗಳನ್ನು ಗುರುತಿಸಿ, ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಸಂತತಿಯನ್ನು ನಾಶಪಡಿಸಬೇಕು.


    ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಡೆಂೆ ಪ್ರಕರಣ ಕಡಿಮೆ ಇದೆ. ಜೂನ್ ತಿಂಗಳ ಅವಧಿಯಲ್ಲಿ 68, ಜುಲೈ ತಿಂಗಳಲ್ಲಿ ಇಲ್ಲಿಯವರೆಗೆ 49 ಪ್ರಕರಣ ದಾಖಲಾಗಿವೆ. ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಡೆಂೆ ಸೇರಿದಂತೆ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ನಮ್ಮ ಇಲಾಖೆ ವರ್ಷಪೂರ್ತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
    ಎಸ್.ಚಿದಂಬರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts