ತಲಕಾಡು: ನದಿ-ಗಿರಿ-ವನ ಒಂದೇ ಕಡೆ ಮೇಳೈಸಿರುವ ಶ್ರೀಸೋಮಶೈಲ ಪುಣ್ಯ ಕ್ಷೇತ್ರದಲ್ಲಿ ಇತಿಹಾಸ ಪ್ರಸಿದ್ಧ ಮುಡುಕುತೊರೆ ಜಾತ್ರೆ ಜ.28ರಿಂದ ಪ್ರಾರಂಭವಾಗಲಿದೆ.
ಜಾತ್ರೆ ಪ್ರಯುಕ್ತ 17 ದಿನಗಳ ಕಾಲ ವಿಶೇಷ ಧಾರ್ಮಿಕ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನೆರವೇರಲಿದ್ದು, ಲಕ್ಷಾಂತರ ಭಕ್ತರು ಭಾವಹಿಸಲಿದ್ದಾರೆ.
ಕ್ರಿ.ಶ.12ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಬೆಟ್ಟದ ಮೇಲಿನ ಶ್ರೀಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ತಲಕಾಡಿನ ಪಂಚಲಿಂಗ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದ್ದು. ಇಲ್ಲಿನ ದೇವಾಲಯ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿರುವುದು ಇಲ್ಲಿನ ವಿಶೇಷ.