ಚಿತ್ರದುರ್ಗ:ಹಿರಿಯೂರು ತಾಲೂಕು ಧರ್ಮಪುರದ ವಾಸವಿ ಮಹಲ್ನಲ್ಲಿ ನ.27ರಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿ ವ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ಜನಪ್ರತಿ ನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಾರ್ವಜನಿಕರು ಕುಂದುಕೊರತೆ ಅಹವಾಲು ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.
21,29 ರಂದು ತಾಲೂಕು ಮಟ್ಟದ ಜನತಾ ದರ್ಶನ
ಹೊಸದುರ್ಗ ತಾಲೂಕು ಅತ್ತಿಮಗ್ಗೆ ಹಾಗೂ 29 ರಂದು ಚಿತ್ರದುರ್ಗ ತಾಲೂಕು ಕುರುಮರಡಿಕೆರೆಯಲ್ಲಿ ತಾಲೂಕು ಮ ಟ್ಟದ ಜನತಾದರ್ಶನ ಏರ್ಪಡಿಸಲಾಗಿದೆ. 21ರಂದು ಬೆಳಗ್ಗೆ 10ಕ್ಕೆ ಅತ್ತಿಮಗ್ಗೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ಹಾಗೂ 29 ರಂದು ಬೆಳಗ್ಗೆ 10ಕ್ಕೆ ಕುರುಮರಡಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿರುವ ಜನತಾದರ್ಶನ ಕಾರ್ಯಕ್ರಮದಲ್ಲಿ ಡಿಸಿ ಜಿಲ್ಲಾಧಿಕಾರಿ ಜಿಆರ್ಜೆ ದಿವ್ಯಾಪ್ರಭು ಹಾಗೂ ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.