More

    23 ಸಾವು, 358 ಹೊಸ ಕೋವಿಡ್ ಪ್ರಕರಣ: ಮಾಸ್ಕ್, ಆರ್‌ಟಿ-ಪಿಸಿಆರ್ ಟೆಸ್ಟ್​, ಮೂರನೇ ಡೋಸ್​ ಕಡ್ಡಾಯವೇ?

    ನವದೆಹಲಿ: ಭಾರತದಲ್ಲಿ ಜೆಎನ್​.1 ಕೋವಿಡ್ ರೂಪಾಂತರ ಪ್ರಕರಣಗಳ ಉಲ್ಬಣದ ನಡುವೆಯೇ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 358 ಹೊಸ ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಆತಂಕದ ಹಿನ್ನೆಲೆಯಲ್ಲಿ ಮಾಸ್ಕ್ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಲಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

    ಜೆಎನ್​.1 ಕೋವಿಡ್​-19 ರೂಪಾಂತರ ಪ್ರಕರಣಗಳು ಹೆಚ್ಚುತ್ತಿರುವ ಆತಂಕ ತಲೆದೋರಿದೆ. ಚಳಿಗಾಲದ ಪ್ರಸ್ತುತ ತಿಂಗಳುಗಳಲ್ಲಿ ಈ ಪ್ರಕರಣಗಳ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿವೆ, ಇದಲ್ಲದೆ, ಕಳೆದ ಎರಡು ವಾರಗಳಲ್ಲಿ ಕೊರೊನಾವೈರಸ್-ಸಂಬಂಧಿತ 23 ಸಾವುಗಳು ಸಂಭವಿಸಿರುವುದನ್ನು ಈ ಮೂಲಗಳು ಖಚಿತಪಡಿಸಿವೆ.

    ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತವು ಗುರುವಾರ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಂಡಿದೆ, ಕಳೆದ 24 ಗಂಟೆಗಳಲ್ಲಿ 358 ಹೊಸ ಸೋಂಕುಗಳು ದಾಖಲಾಗಿವೆ. ಕೇರಳದಲ್ಲಿ ಮೊದಲು ಪತ್ತೆಯಾದ ಕೋವಿಡ್ ರೂಪಾಂತರ JN.1 ಪ್ರಕರಣಗಳು ಉಲ್ಬಣಿಸುತ್ತಿವೆ.

    ಆದರೆ, ವಿಮಾನ ನಿಲ್ದಾಣದಲ್ಲಿ ಮಾಸ್ಕ್ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯ ಮಾಡುವುದನ್ನು ಸರ್ಕಾರ ಸದ್ಯಕ್ಕೆ ಪರಿಗಣಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

    ಹೆಚ್ಚುತ್ತಿರುವ ಆತಂಕದ ಹೊರತಾಗಿಯೂ ಪ್ರಯಾಣದ ನಿರ್ಬಂಧಗಳು, ಕಡ್ಡಾಯ ಮಾಸ್ಕ್ ಅಥವಾ ಕಡ್ಡಾಯ ಮೂರನೇ ಡೋಸ್‌ಗಳ ಬಗ್ಗೆ ಸರ್ಕಾರವು ಸದ್ಯಕ್ಕೆ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ. ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ JN.1 ರೂಪಾಂತರದಲ್ಲಿ ತೀವ್ರ ಅನಾರೋಗ್ಯದ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಿಂದ ಮೂರು ಸಾವುಗಳು ವರದಿಯಾಗಿವೆ, ಅಂತೆಯೇ, ತಾಜಾ ಸೋಂಕುಗಳು ಮುಖ್ಯವಾಗಿ ಕೇರಳ, ಕರ್ನಾಟಕ, ಗುಜರಾತ್, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ವರದಿಯಾಗಿದೆ.

    ದೇಶದ ಹಲವಾರು ಭಾಗಗಳಲ್ಲಿ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಹಠಾತ್ ಹೆಚ್ಚಳವನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸಭೆ ನಡೆಸಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೋವಿಡ್ -19 ರ ಹೊಸ ಮತ್ತು ಉದಯೋನ್ಮುಖ ತಳಿಗಳ ಬಗ್ಗೆ ಎಚ್ಚರ ವಹಿಸುವುದು ಮತ್ತು ಸಿದ್ಧರಾಗಿರುವುದು ಮುಖ್ಯ ಎಂದು ಹೇಳಿದರು.

    ಭಾರತವು ದೇಶಾದ್ಯಂತ ಹೊಸ ಕರೋನವೈರಸ್ ರೂಪಾಂತರದ JN.1 ನ 21 ಪ್ರಕರಣಗಳನ್ನು ಇದುವರೆಗೆ ವರದಿ ಮಾಡಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ ವಿ ಕೆ ಪಾಲ್ ಬುಧವಾರ ಹೇಳಿದ್ದಾರೆ, ಆದರೆ ಭಯಪಡುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. ಸೋಂಕಿತರಲ್ಲಿ ಸುಮಾರು 91 ರಿಂದ 92 ಪ್ರತಿಶತದಷ್ಟು ಜನರು ಮನೆ ಆಧಾರಿತ ಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ಪಾಲ್ ತಿಳಿಸಿದ್ದಾರೆ..

    ಲಭ್ಯವಿರುವ ಚಿಕಿತ್ಸೆಗಳು ಪರಿಣಾಮಕಾರಿಯಾಗಿರುತ್ತವೆ, ಸೋಂಕು ಸೌಮ್ಯವಾಗಿರುತ್ತದೆ. ಎಲ್ಲಾ ವೈರಸ್‌ಗಳು ರೂಪಾಂತರಗೊಳ್ಳುತ್ತವೆ ಎಂದು ತಜ್ಞರು ಹೇಳಿದ್ದಾರೆ.

    ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಬಂಧಿತರ ಕಸ್ಟಡಿ ಜ. 5ರವರೆಗೆ ವಿಸ್ತರಿಸಿದ್ದೇಕೆ?

    ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗೆ ಲೋಕಸಭೆ ಅಸ್ತು: ವಿವಾದಾತ್ಮಕ ಹೊಸ ಕಾನೂನು ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts