More

    ಯೂಕ್ರೇನ್​ನಲ್ಲಿ ಸಿಲುಕ್ಕಿದ್ದವರಲ್ಲಿ ಇವತ್ತೊಂದೇ ದಿನ 2,135 ಮಂದಿ ಭಾರತಕ್ಕೆ; ಆಪರೇಷನ್​ ಗಂಗಾದಲ್ಲಿ ರಕ್ಷಣೆ ಆದವರೆಷ್ಟು?

    ನವದೆಹಲಿ: ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಪರೇಷನ್​ ಗಂಗಾ ಕಾರ್ಯಾಚರಣೆ ನಡೆಸುತ್ತಿದ್ದು, ಇವತ್ತೊಂದೇ ದಿನದಲ್ಲಿ 2,135 ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ.

    ಇದಕ್ಕಾಗಿ ಯೂಕ್ರೇನ್​ನ ನೆರೆಹೊರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳನ್ನು ಬಳಸಲಾಗಿದ್ದು, ಆ ಪೈಕಿ 9 ನವದೆಹಲಿಯಲ್ಲಿ, ಇನ್ನೆರಡು ಮುಂಬೈನಲ್ಲಿ ಲ್ಯಾಂಡ್ ಆಗಿವೆ. ಇವುಗಳ ಪೈಕಿ 6 ವಿಮಾನಗಳು ಬುಡಾಪೆಸ್ಟ್​ನಿಂದ, 2 ಬುಚಾರೆಸ್ಟ್, 2 ರೆಜೌ ಮತ್ತು ಒಂದು ಕೊಶಿನಿಂದ ಹೊರಟಿದ್ದವು.

    ಫೆ. 22ರಿಂದ ವಿಶೇಷ ವಿಮಾನಗಳ ಮೂಲಕ ಯೂಕ್ರೇನ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದುವರೆಗೆ ಸುಮಾರು 16 ಸಾವಿರ ಮಂದಿಯನ್ನು ಸ್ವದೇಶಕ್ಕೆ ಕರೆದುಕೊಂಡು ಬರಲಾಗಿದೆ.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts