ನವದೆಹಲಿ: ಯೂಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ನಡೆಸುತ್ತಿದ್ದು, ಇವತ್ತೊಂದೇ ದಿನದಲ್ಲಿ 2,135 ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ.
ಇದಕ್ಕಾಗಿ ಯೂಕ್ರೇನ್ನ ನೆರೆಹೊರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳನ್ನು ಬಳಸಲಾಗಿದ್ದು, ಆ ಪೈಕಿ 9 ನವದೆಹಲಿಯಲ್ಲಿ, ಇನ್ನೆರಡು ಮುಂಬೈನಲ್ಲಿ ಲ್ಯಾಂಡ್ ಆಗಿವೆ. ಇವುಗಳ ಪೈಕಿ 6 ವಿಮಾನಗಳು ಬುಡಾಪೆಸ್ಟ್ನಿಂದ, 2 ಬುಚಾರೆಸ್ಟ್, 2 ರೆಜೌ ಮತ್ತು ಒಂದು ಕೊಶಿನಿಂದ ಹೊರಟಿದ್ದವು.
ಫೆ. 22ರಿಂದ ವಿಶೇಷ ವಿಮಾನಗಳ ಮೂಲಕ ಯೂಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದುವರೆಗೆ ಸುಮಾರು 16 ಸಾವಿರ ಮಂದಿಯನ್ನು ಸ್ವದೇಶಕ್ಕೆ ಕರೆದುಕೊಂಡು ಬರಲಾಗಿದೆ.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್; ಸಂತಸಪಟ್ಟ ಮಗನ ದೇಶವಿದು..