ಚೆನ್ನೈ: ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಯುವಕ ಅಂದು ಮನೆಯಿಂದ ಹೋದವನು ಎಷ್ಟೊತ್ತಾದರೂ ವಾಪಸ್ ಬರಲಿಲ್ಲ. ಅಪ್ಪ-ಅಮ್ಮ ಗಾಬರಿಯಿಂದ ಕಾದಿದ್ದೇ ಬಂತು. ಕೊನೆಗೂ ಈತ ಜೀವ ಸಹಿತ ಬರಲಿಲ್ಲ..!
ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ನಿತೀಶ್ ಕುಮಾರ್. ತಮಿಳುನಾಡಿನ ಚೆನ್ನೈನ ಕಿಲ್ಪೌಕ್ ನಿವಾಸಿ. ಟ್ಯಾಟೂ ಸ್ಟುಡಿಯೋದಲ್ಲಿ ಪಾರ್ಟ್ಟೈಂ ಕೆಲಸ ಮಾಡಿಕೊಂಡು ಕಾಲೇಜಿನಲ್ಲಿ ಓದುತ್ತಿದ್ದ. ಒಂದಷ್ಟು ಹಣವನ್ನೂ ಕೂಡಿಟ್ಟಿದ್ದ. ಆದರೆ ಆನ್ಲೈನ್ ಜೂಜಾಟದ ಚಟ ಅಂಟಿಸಿಕೊಂಡು, ಇದ್ದ ಹಣವನ್ನೆಲ್ಲ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿದ.
ಭಾನುವಾರ ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬಾರದಾಗ ಅಪ್ಪ-ಅಮ್ಮ ಗಾಬರಿಯಾದರು. ನಿತೀಶ್ ತಮ್ಮನನ್ನು ಸ್ಟುಡಿಯೋಕ್ಕೆ ಕಳಿಸಿದರು. ಅಲ್ಲಿ ಹೋದ ಸೋದರನಿಗೆ ಸ್ಟುಡಿಯೋ ಹೊರಗೆ ಅಣ್ಣನ ಬೈಕ್ ಕಂಡಿತು. ಒಳಗೆ ಲೈಟ್ ಇಲ್ಲದ ಕಾರಣ, ಅಣ್ಣ ಅಲ್ಲಿಯೇ ಮಲಗಿರಬೇಕು, ನಾಳೆ ಬರುತ್ತಾನೆ ಎಂದುಕೊಂಡು ಮನೆಗೆ ವಾಪಸ್ ಹೋದ. ಇದನ್ನೂ ಓದಿ: ಇನ್ಮುಂದೆ ಮದುವೆಯಲ್ಲೂ…ಮಸಣದಲ್ಲೂ 20 ಮಂದಿಗೆ ಮಾತ್ರ ಅವಕಾಶ; ಈ ರಾಜ್ಯದ ಖಡಕ್ ಸೂಚನೆ
ಆದರೆ ಬೆಳಗ್ಗೆಯಾದರೂ ಬಾರದಾಗ ಮತ್ತೊಮ್ಮೆ ಪಾಲಕರೇ ಬಂದರು. ಅಷ್ಟರಲ್ಲಿ ಸ್ಟುಡಿಯೋ ಮಾಲೀಕರೂ ಅಲ್ಲಿಗೆ ಬಂದಿದ್ದರು. ಬಾಗಿಲು ತೆಗೆದಾಗ ನಿತೀಶ್ ಹೆಣ ಕಾಣಿಸಿತು.
ಇನ್ನು ಡೆತ್ ನೋಟ್ ಕೂಡ ಸಿಕ್ಕಿದ್ದು, ನಾನು ಕ್ಯಾಸ್ಟೋ ಕ್ಲಬ್ನಲ್ಲಿ ಹಣವನ್ನೆಲ್ಲ ಕಳೆದುಕೊಂಡೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟಿದ್ದ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)
65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….!