ಬೆಂಗಳೂರು: ಸಾಲ ಕೇಳಲು ಬ್ಯಾಂಕ್ಗೆ ಹೋಗಿದ್ದಾಗ ಲೋನ್ ಸಿಗುವುದಿಲ್ಲ ಎಂದು ಗೊತ್ತಾದ ನಂತರ ಬಾಂಬ್ ಸ್ಫೋಟಿಸುವುದಾಗಿ ಬೆದರಿಸಿ 9.90 ಲಕ್ಷ ರೂ. ದೋಚಿದ್ದ ಅಪರಾಧಿಗೆ 2 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಸಾಫ್ಟ್ವೇರ್ ಕಂಪನಿ ನೌಕರ ರಂಜಲ್ ಭಟ್ಟಾಚಾರ್ (40) ಶಿಕ್ಷೆಗೆ ಒಳಗಾದವ. ಟೆಕ್ಕಿಯಾಗಿದ್ದ ರಂಜಲ್, ಗೃಹಸಾಲಕ್ಕೆ ಹಲವು ಬ್ಯಾಂಕ್ಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ದಾಖಲೆ ಸರಿ ಇಲ್ಲವೆಂದು ವಾಪಸ್ ಕಳುಹಿಸಿದ್ದರು. ಅದೇ ರೀತಿ 2012ರ ಅಕ್ಟೋಬರ್ 19ರ ಮಧ್ಯಾಹ್ನ 3 ಗಂಟೆಯಲ್ಲಿ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿನ ಎಚ್ಡಿಎಫ್ಸಿ ಬ್ಯಾಂಕಿಗೆ ಮುಖಕ್ಕೆ ಬ್ಯಾಂಡೇಜ್ ಬಟ್ಟೆ ಕಟ್ಟಿಕೊಂಡು ಹೋಗಿದ್ದ. ಬ್ಯಾಂಕ್ ವ್ಯವಸ್ಥಾಪಕರ ಬಳಿ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಅವರು ದಾಖಲೆ ಸರಿ ಇಲ್ಲವೆಂದು ಸಾಲ ಕೊಡಲು ನಿರಾಕರಿಸಿದ್ದರು.
ಇದನ್ನೂ ಓದಿ: ನಿವೃತ್ತ ಎಸಿಪಿಗೇ ಮೋಸ; ನಿರ್ಮಾಣ್ ಶೆಲ್ಟರ್ಸ್ ವಿರುದ್ಧ ವಂಚನೆ ಆರೋಪ..
ಆಗ ಬ್ಯಾಂಕ್ ಖಾತೆ ತೆರೆಯಲು ಅರ್ಜಿ ಕೊಟ್ಟಿದ್ದ. ಆ ದಾಖಲೆಯೂ ಸರಿ ಇಲ್ಲದ ಕಾರಣಕ್ಕೆ ಬ್ಯಾಂಕ್ ಖಾತೆನ್ನು ತೆರೆಯಲು ನಿರಾಕರಿಸಿದರು. ಕೋಪಗೊಂಡ ರಂಜಲ್, ಹಣ ಕೊಡುವಂತೆ ಬೆದರಿಕೆ ಒಡ್ಡಿದ್ದ. ಹಣ ಇಲ್ಲ ಹೊರಗೆ ಹೋಗು ಎಂದು ಸೂಚನೆ ಕೊಟ್ಟಾಗ ಸೊಂಟದಲ್ಲಿ ಕಟ್ಟಿಕೊಂಡಿದ್ದ ಸೆಲ್-ವಯರ್ ಸೇರಿ ಬಾಂಬ್ ಮಾದರಿ ವಸ್ತುವನ್ನು ತೋರಿಸಿ ಸ್ಫೋಟ ಮಾಡುವುದಾಗಿ ಬೆದರಿಸಿದ್ದ. ಭಯಗೊಂಡ ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬ್ಯಾಂಕ್ನಿಂದ ಹೊರ ಹೋಗಿದ್ದರು.
ಇದನ್ನೂ ಓದಿ: ವೇಗದಲ್ಲಿದ್ದ ಕಾರು ಮರಕ್ಕೆ ಡಿಕ್ಕಿ, ಕುಲಸಚಿವ ಸ್ಥಳದಲ್ಲೇ ಸಾವು; ಜೇನುನೊಣಗಳ ದಾಳಿಗೆ ಅವರ ಪುತ್ರ-ಪತ್ನಿಯ ಸ್ಥಿತಿ ಗಂಭೀರ..
ಈ ವೇಳೆ ಅಪರಾಧಿ ಕ್ಯಾಷ್ ಕೌಂಟರ್ಗೆ ಹೋಗಿ 9.9 ಲಕ್ಷ ರೂ. ದೋಚಿದ್ದ. ವಿಷಯ ತಿಳಿದ ಇಂದಿರಾನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಂಜಲ್ನನ್ನು ಬಂಧಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಅಂದಿನ ಇನ್ಸ್ಪೆಕ್ಟರ್ (ಹಾಲಿ ಎಸಿಪಿ) ಡಿ.ಕುಮಾರ್ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದರು. 10ನೇ ಎಸಿಎಂಎಂ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ರಂಜಲ್ ಭಟ್ಟಾಚಾರ್ ಅಪರಾಧಿ ಎಂದು ಘೋಷಣೆ ಮಾಡಿ 2 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ; ಪ್ರತಿಭಟನಾನಿರತ ವಿದ್ಯಾರ್ಥಿನಿಗೆ ಡಿಸಿ ಬುದ್ಧಿವಾದ