ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಮಣಿಸಲು ದೇಹದ ಇಮ್ಯುನಿಟಿ ಶಕ್ತಿಯೇ ಪ್ರಮುಖ ಸಾಧನ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದ ಕೆಲವರಿಗೆ ಕರೊನಾ ವೈರಸ್ ಬಂದು ಹೋಗುವುದು ಗೊತ್ತಾಗುವುದಿಲ್ಲ ಎಂದು ಈ ಹಿಂದೆ ತಜ್ಞರು ಹೇಳಿದ ಮಾತಿಗೆ ನೂತನ ವರದಿಯೊಂದು ಪುಷ್ಟಿ ನೀಡಿದೆ.
ಈಗಾಗಲೇ ಕೆಲವರು ಆ್ಯಂಟಿಬಾಡಿ ಬೆಳೆಸಿಕೊಂಡು ಕರೊನಾ ವಿರುದ್ಧ ಸೆಣಸಿದ್ದಾರೆ ಎಂಬುದು ಥೈರೋಕೇರ್ ಲ್ಯಾಬೋರೇಟರಿ ಹೆಸರಿನ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಸಂಸ್ಥೆಯು ಆ್ಯಂಟಿಬಾಡಿ ಟೆಸ್ಟ್ ನಡೆಸಿದ್ದು, ಇದರಲ್ಲಿ ರಾಜ್ಯಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ದೇಶಾದ್ಯಂತ ಸುಮಾರು 600 ಏರಿಯಾಗಳಲ್ಲಿ 60 ಸಾವಿರ ಪರೀಕ್ಷೆಗಳನ್ನು ಥೈರೋಕೇರ್ ಸಂಸ್ಥೆ ನಡೆಸಿದೆ.
ಅಧ್ಯಯನ ಪ್ರಕಾರ ದೇಶದಲ್ಲಿ ಈಗಾಗಲೇ 15% ಮಂದಿಗೆ ಕರೊನಾ ಬಂದು ಹೋಗಿದೆ. ಅಂದರೆ ದೇಶದ 18 ಕೋಟಿ ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಬೆಳೆದಿದೆ ಎನ್ನುತ್ತಿದೆ ಥೈರೋಕೇರ್ ಲ್ಯಾಬೋರೇಟರಿಯ ಅಂಕಿ-ಅಂಶಗಳು.
ಇದನ್ನೂ ಓದಿ: ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ಯುವಕ ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಸರ್ ಕುಡಿದ..!
ಈಗಾಗಲೇ ಕರೊನಾ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಕರೊನಾ ಬಂದು ಹೋಗಿದೆ. ಇಲ್ಲಿ ನಡೆಸಿದ ಆ್ಯಂಟಿಬಾಡಿ ಟೆಸ್ಟ್ನಲ್ಲಿ ಶೇ.44 ಮಂದಿಯಲ್ಲಿ ಕರೊನಾ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಬಳ್ಳಾರಿಯಲ್ಲೂ ಶೇ. 24 ಮಂದಿಗೆ ಕರೊನಾ ಈಗಾಗಲೇ ಬಂದು ಹೋಗಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಆ್ಯಂಟಿಬಾಡಿ ಬೆಳೆದಿದೆ ಎನ್ನುತ್ತಿದೆ ಈ ಅಧ್ಯಯನ.
#AntibodyTesting. Delhi and Karnataka. Cut off 50 reported. Pincode wise positivity. https://t.co/Hd7hFIdv7q pic.twitter.com/aiqCudOfVz
— Antibody Velumani. (@velumania) July 17, 2020