ಚೆನ್ನೈ: ಹಬ್ಬದ ಸಂದರ್ಭದಲ್ಲಿ ಎತ್ತಿನ ಬಂಡಿಯಲ್ಲಿಟ್ಟಿದ್ದ ಜನರೇಟರ್ಗೆ ಕೂದಲು ಸಿಲುಕಿ 13 ವರ್ಷದ ಅಪ್ರಾಪ್ತೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.
ಮೃತ ಹುಡುಗಿಯನ್ನು ಲಾವಣ್ಯ ಎಂದು ಗುರುತಿಸಲಾಗಿದೆ. ಈಕೆ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಡೀಸೆಲ್ ಚಾಲಿತ ಜನರೇಟರ್ ಅನ್ನು ಎತ್ತಿನ ಬಂಡಿಯಲ್ಲಿ ಇಡಲಾಗಿತ್ತು. ಅದೇ ಎತ್ತಿನ ಗಾಡಿಯಲ್ಲಿ ಹುಡುಗಿ ಇರುವಾಗ ಜನರೇಟ್ನ ಸಣ್ಣ ಫ್ಯಾನ್ಗೆ ಕೂದಲು ಸಿಲುಕಿದೆ. ಆದರೆ, ಸ್ಥಳದಲ್ಲಿ ಭಾರೀ ಶಬ್ದ ಇದ್ದಿದ್ದರಿಂದ ಬಾಲಕಿ ಅಳುವುದು ಯಾರಿಗೂ ಗೊತ್ತಾಗಲಿಲ್ಲ. ಜನರೇಟರ್ ಸ್ವಿಚ್ ಆಫ್ ಮಾಡಿದಾಗ ಮಾತ್ರ ಬಾಲಕಿ ಅಳುವುದು ಕೇಳಿಸಿದೆ.
ಬಾಲಕಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಂದು ಕಾಂಚಿಪುರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಬಾಲಕಿಯ ಪ್ರಾಣವನ್ನು ಉಳಿಸಲು ಆಗಲಿಲ್ಲ. ಈ ಕುರಿತು ಮಗರಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನರೇಟರ್ ಆಪರೇಟರ್ ಮುನಿಸಾಮಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಮನೆ ಮಗನಿಗೆ ವಿಷ ಕೊಡಬೇಡಿ, ಹಾಲು ಕೊಡಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ
ಲಾವಣ್ಯ ಅವರ ತಾಯಿ ಮೂರು ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಆಕೆಯ ತಂದೆ ಸರವಣನ್ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ತನ್ನ ಸಹೋದರ ಭುವನೇಶ್ ಜೊತೆಗೆ ತನ್ನ ಅಜ್ಜಿಯರ ಜೊತೆ ವಾಸಿಸುತ್ತಿದ್ದಳು. (ಏಜೆನ್ಸೀಸ್)
ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ