More

    ಹಬ್ಬದ ಸಂಭ್ರಮದ ಮಧ್ಯೆ ಯಾರಿಗೂ ಕೇಳಲಿಲ್ಲ ಅಪ್ರಾಪ್ತೆಯ ಅಳು: ದುರಂತ ಅಂತ್ಯ ಕಂಡ 13ರ ಬಾಲೆ

    ಚೆನ್ನೈ: ಹಬ್ಬದ ಸಂದರ್ಭದಲ್ಲಿ ಎತ್ತಿನ ಬಂಡಿಯಲ್ಲಿಟ್ಟಿದ್ದ ಜನರೇಟರ್​ಗೆ ಕೂದಲು ಸಿಲುಕಿ 13 ವರ್ಷದ ಅಪ್ರಾಪ್ತೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.

    ಮೃತ ಹುಡುಗಿಯನ್ನು ಲಾವಣ್ಯ ಎಂದು ಗುರುತಿಸಲಾಗಿದೆ. ಈಕೆ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

    ಇದನ್ನೂ ಓದಿ: ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ

    ಡೀಸೆಲ್​ ಚಾಲಿತ ಜನರೇಟರ್​ ಅನ್ನು ಎತ್ತಿನ ಬಂಡಿಯಲ್ಲಿ ಇಡಲಾಗಿತ್ತು. ಅದೇ ಎತ್ತಿನ ಗಾಡಿಯಲ್ಲಿ ಹುಡುಗಿ ಇರುವಾಗ ಜನರೇಟ್​ನ ಸಣ್ಣ ಫ್ಯಾನ್​ಗೆ ಕೂದಲು ಸಿಲುಕಿದೆ. ಆದರೆ, ಸ್ಥಳದಲ್ಲಿ ಭಾರೀ ಶಬ್ದ ಇದ್ದಿದ್ದರಿಂದ ಬಾಲಕಿ ಅಳುವುದು ಯಾರಿಗೂ ಗೊತ್ತಾಗಲಿಲ್ಲ. ಜನರೇಟರ್​ ಸ್ವಿಚ್​ ಆಫ್​ ಮಾಡಿದಾಗ ಮಾತ್ರ ಬಾಲಕಿ ಅಳುವುದು ಕೇಳಿಸಿದೆ.

    ಬಾಲಕಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಂದು ಕಾಂಚಿಪುರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಬಾಲಕಿಯ ಪ್ರಾಣವನ್ನು ಉಳಿಸಲು ಆಗಲಿಲ್ಲ. ಈ ಕುರಿತು ಮಗರಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನರೇಟರ್ ಆಪರೇಟರ್ ಮುನಿಸಾಮಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ: ಮನೆ ಮಗನಿಗೆ ವಿಷ ಕೊಡಬೇಡಿ, ಹಾಲು ಕೊಡಿ;  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ 

    ಲಾವಣ್ಯ ಅವರ ತಾಯಿ ಮೂರು ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಆಕೆಯ ತಂದೆ ಸರವಣನ್ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ತನ್ನ ಸಹೋದರ ಭುವನೇಶ್ ಜೊತೆಗೆ ತನ್ನ ಅಜ್ಜಿಯರ ಜೊತೆ ವಾಸಿಸುತ್ತಿದ್ದಳು. (ಏಜೆನ್ಸೀಸ್​)

    ಎಲ್ಲವನ್ನೂ ಅನುಭವಿಸಿಯೇ ಒಪ್ಪಬೇಕಾ?

    ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ

    ಸಂಸ್ಕಾರಕ್ಕೆ ಮಾನ್ಯತೆ: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts