More

    ಸೇತುವೆಯಿಂದ ಏಕಾಏಕಿ ನದಿಗೆ ಉರುಳಿತು ಬಸ್​: 13 ಜನರ ಸಾವು

    ಧಾರ್​: ನದಿಗೆ ಬಸ್​ ಉರುಳಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, 15 ಜನರನ್ನು ರಕ್ಷಿಸಲಾಗಿದೆ. ಮಹಾರಾಷ್ಟ್ರ ಸಾರಿಗೆ ಬಸ್​ ಇದಾಗಿದ್ದು, ಮಧ್ಯಪ್ರದೇಶ ಧಾರ್​ ಜಿಲ್ಲೆಯ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ಬಸ್​ ನರ್ಮದಾ ನದಿಯಲ್ಲಿ ಉರುಳಿದೆ.

    ಇಂದೋರ್​ನಿಂದ ಪುಣೆಗೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ, ಏಕಾಏಕಿ​​ ಸೇತುವೆ ಮೇಲಿಂದ ನದಿಗೆ ಉರುಳಿದೆ. ಸೋಮವಾರ ಮುಂಜಾನೆ ಈ ಅವಘಡ ಸಂಭವಿಸಿದ್ದೆದು, ಸದ್ಯ ಬಸ್ಸನ್ನು ನದಿಯಿಂದ ಹೊರತೆಗೆಯಲಾಗಿದೆ. ಉಳಿದ 15ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಸ್ಸಿನಲ್ಲಿ 40 ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಎನ್​ಡಿಆರ್​ಎಫ್​ ತಂಡದಿಂದ ರಕ್ಷಣಾ ಕಾರ್ಯ ನಡೆಸಲಾಯಿತು. ಈ ಭಾಗದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಘಟನೆಗೆ ಇದೂ ಒಂದು ಕಾರಣ ಎನ್ನಲಾಗಿದೆ. (ಏಜೆನ್ಸೀಸ್​)

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts