ಗುಬ್ಬಿ: ಶನಿವಾರ ಬೆಳಗ್ಗೆ ಮನೆಯಲ್ಲೇ ಆಟವಾಡಿಕೊಂಡಿದ್ದ 12 ವರ್ಷದ ಬಾಲಕ ಮಧ್ಯಾಹ್ನ ಅನುಮಾನಸ್ಪದವಾಗಿ ಸಮೀಪದ ಪೊದೆ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಾರನಳ್ಳಿಯ ಬಿಜೆಪಿ ಮುಖಂಡ ಶಂಕರೇಗೌಡರ ಪುತ್ರ ಉದಯ್ (12) ಮೃತ.
ಬಾಲಕ ಉದಯ್ ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾನೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮೃತ ಬಾಲಕನ ದೇಹದ ಮೇಲೆ ಪ್ರಾಣಿ ದಾಳಿ ಮಾಡಿರುವ ಗುರುತು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಗೂಢ ಸಾವಿನ ಕಾರಣ ತಿಳಿಯಲಿದೆ. ಮಧ್ಯಾಹ್ನ ಬಾಲಕನು ಹೊಲಕ್ಕೆ ಹೋಗಿದ್ದ ಎನ್ನಲಾಗಿದೆ. ಸಿ.ಎಸ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿ ದಂಡೆಯಲ್ಲಿ ಊಟ ಮಾಡುವವರೆಗೂ ಕಾದ ಜವರಾಯ… ನೋಡನೋಡುತ್ತಿದ್ದಂತೆ ಇಬ್ಬರ ಪ್ರಾಣ ಹೊತ್ತೊಯ್ದ!
ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ