ಕಾಬುಲ್: ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಆಫ್ಘಾನಿಸ್ತಾನ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್ ಬಂಡುಕೋರರು ಇಡೀ ಆಫ್ಘಾನ್ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ತನ್ನ ಕಠೋರ ನಿಲುವುಗಳಿಂದ ರಕ್ತದೊಕುಳಿ ಆರಂಭಿಸಿದೆ. ಇಡೀ ಆಫ್ಘಾನ್ನಲ್ಲಿ ಸದ್ಯ ಮಾನವೀಯತೆ ಮರೆಯಾಗಿದೆ.
ತಾಲಿಬಾನಿಗಳು ಕಳೆದ ಭಾನುವಾರ ಕಾಬುಲ್ ವಶಪಡಿಸಿಕೊಳ್ಳುತ್ತಿದಂತೆ ಅವರ ಅಟ್ಟಹಾಸಕ್ಕೆ ಬೆದರಿ ಆಫ್ಘಾನ್ ಪ್ರಜೆಗಳು ಏರ್ಪೋರ್ಟ್ನ ಧಾವಿಸಿ ಬಂದರು. ದೇಶ ತೊರೆಯುವ ಯತ್ನದಲ್ಲಿ ಕೆಲವರು ಸಫಲವಾದರೆ, ಇನ್ನು ಕೆಲವರು ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾನುವಾರದಿಂದ ಇಲ್ಲಿಯವರೆಗೂ ಕಾಬುಲ್ ಏರ್ಪೋರ್ಟ್ ಸುತ್ತ ಸುಮಾರು 12 ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ನ್ಯಾಟೋ ಮತ್ತು ತಾಲಿಬಾನ್ ಅಧಿಕಾರಿಗಳು 12 ಸಾವು ಸಂಭವಿಸಿರುವ ಬಗ್ಗೆ ಖಚಿತಪಡಿಸಿದೆ.
ವಿಮಾನ ನಿಲ್ದಾಣದ ಗೇಟ್ಗಳಲ್ಲಿ ಜನಸಂದಣಿಯನ್ನು ತಡೆಯಲು ತಾಲಿಬಾನ್ ಪ್ರಯತ್ನಿಸುತ್ತಿದ್ದು, ಯಾರಿಗೆ ಪಾಸ್ಪೋರ್ಟ್, ವೀಸಾ ಮುಂತಾದ ಕಾನೂನು ಹಕ್ಕಿದೆ ಅವರು ದೇಶದಿಂದ ಹೊರಗೆ ಹೋಗಿ, ಕಾನೂನು ಹಕ್ಕು ಇಲ್ಲದಿದರೆ, ಸುಮ್ಮನೆ ಮನೆಗೆ ನಡೆಯಿರಿ ಎಂದು ತಾಲಿಬಾನ್ ಬಂಡುಕೋರನೊಬ್ಬ ಸ್ಥಳೀಯರಿಗೆ ಎಚ್ಚರಿಕೆಯನ್ನು ನೀಡಿದ್ದಾನೆ.
ಏರ್ಪೋರ್ಟ್ನಲ್ಲಿ ಯಾರಿಗೂ ತೊಂದರೆ ನೀಡಲು ನಾವು ಬಯಸುವುದಿಲ್ಲ ಎಂದು ಹೆಸರೇಳಿಕೊಳ್ಳಲು ಇಚ್ಛಿಸದ ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)
‘ರಕ್ಷಾ ಬಂಧನ’: ಯುಪಿ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯೋಗಿ
ಮತ್ತೆ ಕರಾಳತೆಯ ಭೀತಿ: ತಾಲಿಬಾನ್ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!
ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ “ಮಹಾನಾಯಕ ಅಂಬೇಡ್ಕರ್” ಧಾರಾವಾಹಿಯ ಪ್ರೊಮೊ ಬಿಡುಗಡೆ