More

    ಆಸ್ತಿ ಉತಾರಗೆ 10 ಸಾವಿರ ರೂ. ಲಂಚ, ಕಂದಾಯ ಇಲಾಖೆ ನೌಕರ ಲೋಕಾ ಬಲೆಗೆ

    ಶಿಗ್ಗಾಂವಿ: ಆಸ್ತಿ ಉತಾರಗಳನ್ನು ಪೂರೈಸಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಪುರಸಭೆ ಕಂದಾಯ ವಿಭಾಗದ (ಎಸ್​ಸಿಎ) ನೌಕರ ಸತೀಶ ತಳವಾರ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

    ಪಟ್ಟಣದ ಅಬ್ದುಲ್ ರಶೀದ್ ದಿವಾನ್ದಾರ್ ಎಂಬುವವರಿಗೆ ಸಂಬಂಧಿಸಿದ ಹಳೇ ಕೈಬರಹ ಉತ್ತಾರ ಕೊಡಲು 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಪುರಸಭೆ ಆವರಣದಲ್ಲಿ 8 ಸಾವಿರ ರೂ. ಪಡೆದುಕೊಳ್ಳುವಾಗ ಸತೀಶ ತಳವಾರ ಲೋಕಾಯುಕ್ತರ ಬಲಿಗೆ ಸಿಕ್ಕು ಬಿದ್ದಿದ್ದಾರೆ.

    ಆರೋಪಿಯನ್ನು ಪುರಸಭೆ ಕಚೇರಿಯಲ್ಲಿ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts