More

    ಹೋರಾಟಗಾರರ ತ್ಯಾಗ ಸ್ಮರಣೀಯ

    ಅರಟಾಳ: ನಾವಿಂದು ದೇಶದಲ್ಲಿ ಸಂತೋಷದಿಂದ ಬಾಳುತ್ತಿದ್ದೇವೆಂದರೆ ಅದಕ್ಕೆ ಸ್ವಾತಂತ್ರೃ ಹೋರಾಟಗಾರರ ತ್ಯಾಗ, ಬಲಿದಾನವೇ ಕಾರಣ ಎಂದು ರಾಣಿ ಚನ್ನಮ್ಮ ಫೌಂಡೇಷನ್ ಅಧ್ಯಕ್ಷ ಶಶಿಧರ ಬುರ್ಲಿ ಹೇಳಿದರು.

    ಸಮೀಪದ ಬಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವದ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರೃ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪನ್ಯಾಸಕ ಸದಾನಂದ ಮಾಡಗ್ಯಾಳ ಮಾತನಾಡಿದರು. ಸ್ವಾತಂತ್ರ್ಯ ಯೋಧರಾದ ಧನವಂತ ಹಳಿಂಗಳಿ, ಸಿದ್ದವ್ವ ಮಾಳಿ, ಶ್ರೀಶೈಲ ಮಾಳಿ ಅವರನ್ನು ಸನ್ಮಾನಿಸಲಾಯಿತು. ಸದಾನಂದ ಮಾಡಗ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಹಳಿಂಗಳಿ, ಸುರೇಶ ಮಮದಾಪುರ, ಮೈಗೂರ ರಾಚಪ್ಪ ಮಹಾರಾಜರು, ಎಂ.ಎಸ್. ಮಡಿವಾಳ, ಎಸ್.ಎಂ. ಸಾವಳಗಿ, ಜಿ.ಎಸ್. ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts