More

    ಹೊರನಾಡು ಶೃಂಗೇರಿಗೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಭೇಟಿ

     ಕಳಸ: ರಾಜ್ಯಪಾಲ ಥಾವರ್​ಚಂದ್ ಗೆಹಲೋಥ್ ಗುರುವಾರ ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅನ್ನಪೂರ್ಣೆಶ್ವರಿ ದರ್ಶನ ಪಡೆದರು. ಬುಧವಾರ ಬೆಳಗ್ಗೆ ಧರ್ಮಸ್ಥಳ ಮುಂಜುನಾಥನ ದರ್ಶನ ಮಾಡಿ ಸಂಜೆ ಕುದುರೆಮುಖಕ್ಕೆ ಭೇಟಿ ನೀಡಿ ಅಲ್ಲಿಯ ಲಕ್ಯಾ ಡ್ಯಾಮ್ ಹಿನ್ನೀರು ಪ್ರದೇಶ ವೀಕ್ಷಿಸಿದರು. ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಭದ್ರಾ ನೇಚರ್ ಕ್ಯಾಂಪ್​ನ ಜಂಗಲ್ ಲಾಡ್ಜ್​ನಲ್ಲಿ ವಾಸ್ತವ್ಯ ಮಾಡಿದ್ದರು.

    ಗುರುವಾರ ಬೆಳಿಗ್ಗೆ 10.05ಕ್ಕೆ ಶ್ರೀ ಕ್ಷೇತ್ರ ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಹಿತ ಆಗಮಿಸಿ ಅಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದರು. ಬಳಿಕ ಶೃಂಗೇರಿಗೆ ತೆರಳಿದರು. ರಾಜ್ಯಪಾಲರ ಭೇಟಿ ಹಿನ್ನಲೆಯಲ್ಲಿ ಕುದುರೆಮುಖದಿಂದ ಹೊರನಾಡುವರೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾಜ್ಯಪಾಲರು ಹೊರನಾಡಿಗೆ ಬಂದು ಹೋಗುವವರೆಗೆ ಬೇರೆ ಭಕ್ತರಿಗೆ ಪ್ರವೇಶ ಅವಕಾಶ ಕಲ್ಪಿಸಲಿಲ್ಲ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ಎಸ್ಪಿ ಉಮಾ ಪ್ರಶಾಂತ್, ಎಸಿ ರಾಜೇಶ್, ತಹಸೀಲ್ದಾರ್ ಹೇಮಂತ್ ಕುಮಾರ್, ಹೊರನಾಡಿನ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts