More

    ಹುಡುಗಿಗಾಗಿ ಹೊಡೆದಾಟದ ವಿಡಿಯೋ ವೈರಲ್

    ಹುಬ್ಬಳ್ಳಿ: ದೇವಾಂಗಪೇಟೆಯ ಸ್ಮಶಾನದ ಬಳಿ ಹುಡುಗಿ ವಿಚಾರವಾಗಿ ಯುವಕರ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೂರಜ್, ಶುಭಂ, ವರುಣ ಹಾಗೂ ಸಂಪತ್ ಎನ್ನುವ ಯುವಕರು ಗುಂಪುಕಟ್ಟಿಕೊಂಡು ಬಂದು ಕಾರ್ತಿಕ್ ಮತ್ತು ನಾಗರಾಜ ಕುತ್ತಿಗೆ ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದರು. ಈ ಕುರಿತು ಎರಡೂ ಕಡೆಯಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ. 18ರಂದು ಈ ಘಟನೆ ನಡೆದಿದ್ದು, ಈಗ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಯುವಕರಿಗೆ ಪೊಲೀಸರ ಭಯವಿಲ್ಲವೇ? ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts