More

    ಹಿರಿದೇವಿ ಅಮ್ಮನ ವಿಶೇಷ ಹೂವಿನ ರಥೋತ್ಸವ

    ಕೆ.ಆರ್.ಸಾಗರ: ಸಮೀಪದ ಬೆಳಗೊಳದಲ್ಲಿ ಗ್ರಾಮದೇವತೆ ಹಿರಿದೇವಿ ಅಮ್ಮನ ವಿಶೇಷ ಹೂವಿನ ರಥೋತ್ಸವ ಶುಕ್ರವಾರ ರಾತ್ರಿ ಸಡಗರ ಹಾಗೂ ಸಂಭ್ರಮದಿಂದ ನಡೆಯಿತು.

    ಹೂವಿನ ರಥೋತ್ಸವಕ್ಕೆ ಗ್ರಾಮದ ಮುಖಂಡರು ಚಾಲನೆ ನೀಡಿದರು. ಮೆರವಣಿಗೆ ಗ್ರಾಮದ ಬೀದಿಗೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಎತ್ತಿ, ಹಣ್ಣು ಕಾಯಿ ಒಡೆದು ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಗ್ರಾಮದ ಗರಡಿಗಳಲ್ಲಿ ಪೈಲ್ವಾನರ ಉಸ್ತಾದ್ ನೇತೃತ್ವದಲ್ಲಿ ಮಟ್ಟಿ ಪೂಜೆ ನಡೆಯಿತು. ಮುಸ್ಲಿಂ ಧರ್ಮಗುರುಗಳು ಅಂಬಾ ಭವಾನಿಗೆ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆದರು.

    ಕಾಳಾಚಾರಿ, ಹೊಸ, ಹಳೇ, ಹುಚ್ಚಕ್ಕನ ದಾಸೇಗೌಡರು, ಸುಡುಗಾಡೇಗೌಡರು ಸೇರಿದಂತೆ ಹಲವು ಗರಡಿಗಳಿಂದ ದೇವಿಗೆ ಹೂವಿನ ಹಾರವನ್ನು ಸಮರ್ಪಿಸಲಾಯಿತು. ದೇವರ ರಥಕ್ಕೆ ಹೂವಿನ ಚಪ್ಪರ ಮಾಡಿದ್ದು ವಿಶೇಷವಾಗಿತ್ತು.

    ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಪಿಐ ಪುನೀತ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

    ಯಜಮಾನರಾದ ಶ್ರೀನಿವಾಸೇಗೌಡ, ಚಿಕ್ಕ ಯಜನಮಾನ ವಿಷಕಂಠೇಗೌಡ, ತಾಪಂ ಮಾಜಿ ಸದಸ್ಯ ಬಿ.ಎಂ.ಸ್ವಾಮಿಗೌಡ, ಗ್ರಾಪಂ ಅಧ್ಯಕ್ಷೆ ಸುಭದ್ರಮ್ಮ, ಉಪಾಧ್ಯಕ್ಷ ರ‌್ಯಾಂಬೋ ರವಿ, ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಸದಸ್ಯರಾದ ಪ್ರಕಾಶ್, ಶಿವಕುಮಾರ್, ಮಾಜಿ ಉಪಾಧ್ಯಕ್ಷ ಮಂಜುನಾಥ್ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts