More

    ಸ್ನೇಹ ಬೆಳೆಸಲು ಹಿಂದುತ್ವ ಕಟುವಾದಿಗಳು ಸಿದ್ದ

    ಬಾಗಲಕೋಟೆ: ಹಲವು ವರ್ಷಗಳಿಂದ ಜಠಿಲ ಸಮಸ್ಯೆಯಾಗಿದ್ದ ಅಯೋದ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಯಾವುದೇ ಗೊಂದಲ, ದೊಡ್ಡ ಸಮಸ್ಯೆಯಾಗದೇ ಸರಳವಾಗಿ ಆಗುತ್ತಿದೆ. ಅದೇ ಮಾದರಿಯಲ್ಲಿ ಕಾಶಿ,ಮಧುರಾ ಶ್ರದ್ಧಾ ಕೇಂದ್ರಗಳಾಗಲಿವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
    ನವನಗರದ ಬಿಜೆಪಿ ನೂತನ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಮೊಘಲರ ಗುಂಡಾಗಿರಿ ಆಡಳಿತದಿಂದ ದೇವಾಲಯಗಳನ್ನು ತೆಗೆದು ಮಸೀದಿಗಳನ್ನು ಕಟ್ಟಿದ್ದನ್ನು ಕಾನೂನು ಅಡಿಯಲ್ಲಿ ಮಸಿದಿಗಳನ್ನು ಧ್ವಂಸಗೊಳಿಸಿ ದೇವಾಲಯಗಳನ್ನು ಕಟ್ಟಲಾಗುವುದು. ದೇಶವನ್ನು ಉಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
    ಕಾಂಗ್ರೆಸ್ ನಾಯಕರು ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳಲು ಏನಾದರೂ ಸಂಘಟನೆ ಮಾಡಲು ಹೊರಟರೆ ಅವರ ಹಿಂದೆ ಹೋಗುವ ಜನರಿಲ್ಲ. ಆರ್‌ಎಸ್‌ಎಸ್ ನಾಯಕರ ಬಗ್ಗೆ ಟೀಕೆ ಮಾಡಲು ಯಾವ ಕಾರ್ಯಕರ್ತರು ಮುಂದಾಗುವುದಿಲ್ಲ. ಆರ್‌ಎಸ್‌ಎಸ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ದೇಶದಲ್ಲಿ ಇರುವ ಮುಸ್ಲಿಂ ಸಮಾಜದವರೆಲ್ಲ ಕೆಟ್ಟವರಲ್ಲ. ಅವರಲ್ಲಿಯೇ ಕೆಲವರು ಕೆಟ್ಟವರಿದ್ದಾರೆ. ಕೆಲವೊಂದು ಮುಸ್ಲಿಂ ಜನರು ಭಯೋತ್ಪಾದನೆ ಹಾಗೂ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದವರ ಬಗ್ಗೆ ಹಿಂದುತ್ವ ಕಟುವಾದಿಗಳು ಟೀಕೆ ಮಾಡುತ್ತಾರೆ. ಭಯೋತ್ಪಾದನೆ ಹಾಗೂ ದೇಶದ್ರೋಹಿ ಕೆಲಸ ಮಾಡುವುದನ್ನು ಬಿಟ್ಟು ಭಾರತದಲ್ಲಿ ಬದುಕಲು ಬಯಸಿದರೆ ಅಂತಹವರ ಜತೆ ಸ್ನೇಹ ಬೆಳೆಸಲು ಹಿಂದುತ್ವ ಕಟುವಾದಿಗಳು ತಯಾರಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts