More

    ಭಾರತೀಯತೆಯನ್ನು ತುಳಿಯಲು ಸಿದ್ದವಾದ ಕಾಂಗ್ರೆಸ್ಸ

    ಬಾಗಲಕೋಟೆ: ಹೇಗಾದರೂ ಸರಿ ಅಧಿಕಾರ ಹಿಡಿಯಲೇಬೇಕಂದು ಕಾಂಗ್ರೆಸ್ಸ ಮನಸ್ಸಿಗೆ ತೋಚಿದ್ದನ್ನು ಘೋಷಿಸುತ್ತಾ ಭಾರತೀಯತೇಯನ್ನೆ ತುಳಿಯಲು ಸಿದ್ದವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಅವರು ಲೋಕಸಭಾ ಚುನಾವಣೆ ನಿಮಿತ್ಯ ನವನಗರದ ೩೨ ನೇ ವಾರ್ಡಿನಲ್ಲಿನ ವ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ದೇಶದಲ್ಲಿ ರಾಹುಲ್ ಗಾಂಧಿ ಜನರ ಆಸ್ತಿಯನ್ನು ಎಕ್ಸ್-ರೆ ಮಾಡಿ ಎಲ್ಲವನ್ನು ಹಂಚುವುದಾಗಿ ಹೇಳುತ್ತಿದ್ದಾರೆ, ಸ್ಯಾಮ್ ಪಿತ್ರೋಡ ತಂದೆಯ ಆಸ್ತಿ ಮಕ್ಕಳಿಗೆ ಸೇರಬೇಕೆಂದರೆ ಆಸ್ತಿ ಶೇ.೫೫ ರಷ್ಟು ಸರ್ಕಾರಕ್ಕೆ ತೆರಿಗೆಯಾಗಿ ಕಟ್ಟುವ ಕಾನೂನು ರೂಪಿಸುವುದು ಅವಶ್ಯಕತೆ ಇದೆ ಎಂಬ ಸಲಹೆ ನೀಡಿದ್ದಾನೆ, ಈ ಸ್ಯಾಮ ಪಿತ್ರೋಡ ಸಾಮಾನ್ಯ ಕಾಂಗ್ರಸ್ಸ ನಾಯಕನಲ್ಲ, ಈತ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅವರ ಸಲಹೆಗಾರನಾಗಿದ್ದವನು, ಪ್ರಸ್ತುತ ರಾಹುಲ್ ಗಾಂಧಿಯ ಆಪ್ತ ಸಲಹೆಗಾರ, ಒಂದು ರೀತಿ ಈತ ಕಾಂಗ್ರೆಸ್ ಬ್ರೈನ್, ತನ್ನ ಸ್ವಾರ್ಥಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಕಾಂಗ್ರೆಸ್ ಮತ್ತೆ ಭಾರತವನ್ನು ಪ್ರಪಾತಕ್ಕೆ ತಳ್ಳುವ ಯೋಜನೆ,ಯೋಚನೆ ವ್ಯವಸ್ಥೆಗಳನ್ನೆ ತರಲು ಮುಂದಾಗಿರುವುದು ನೋಡಿದರೆ ಕಾಂಗ್ರೆಸ್ಸ ಅಂತರಾಷ್ಟ್ರೀಯ ಷಡ್ಯಂತ್ರಕ್ಕೆ ಕೈ ಜೋಡಿಸಿದಂತೆ ಕಾಣುತ್ತದೆ, ಇದರಿಂದ ಜನ ಜಾಗೃತರಾಗಿರಬೇಕು, ದೇಶದ ಜನರ ಸಂಪತ್ತು ಜನರಲ್ಲಿರಬೇಕು, ದೇಶದ ಹಿತಕ್ಕಾಗಿ ಬಜಿಪಿಗೆ ಮತನೀಡಿ ಎಂದರು.

    ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮಾತನಾಡಿ ದೇಶದಲ್ಲಿ ಬಡವರನ್ನು ಬಡವರಾಗಿಟ್ಟು ದೇಶದಲ್ಲಿ ಅಭಿವೃದ್ಧಿ ಮಾಡದೆ ಬರಿ ಸುಳ್ಳಿನ ರಾಜಕಾರಣ ಮಾಡಿರುವುದೆ ಕಾಂಗ್ರೆಸ್ಸಿನ ಸಾಧನೆ, ಅದು ಇಂದು ಕೂಡಾ ಮುಂದುವರೆದಿದೆ, ಬಿಜೆಪಿಯಿಂದ ದೇಶದ ಅಭಿವೃದ್ಧಿಯಾಗುತ್ತಿರುವುದನ್ನು ಕಾಂಗ್ರೆಸ್ಸಿಗೆ ಸಹಿಸಲು ಆಗುತ್ತಿಲ್ಲಾ, ನರೇಂದ್ರ ಮೋದಿ ಪ್ರದಾನಿಯಾದ ನಂತರ ದೇಶದಲ್ಲಿ ಶಾಂತಿ ನೆಲಸಿದ್ದು, ಪಕ್ಕದ ಚಿನಾ, ಪಾಕಿಸ್ತಾನದ ಸದ್ದಡಗಿದೆ, ದೇಶದ ಸುರಕ್ಷತೆ ದೃಷ್ಟಿಯಿಂದ ಸಮರ್ಥ ಸರಕಾರ, ಸಮರ್ಥ ಪ್ರಧಾನಮಂತ್ರಿ ಮೊದಿಯವರಾಗಿದ್ದಾರೆ, ದೇಶದಲ್ಲಿ ಒಂದು ದೇಶ ಒಂದು ಕಾನೂನು ಜಾರಿಗೆ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗಲಿ ಎಂದರು.

    ಸಭೆಯಲ್ಲಿ ಮಾಜಿ ಬಿಟಿಡಿಎ ಅಧ್ಯಕ್ಷ ಜಿ.ಎನ್.ಪಾಟೀಲ. ಬಸವರಾಜ ಯಂಕಂಚಿ. ರಾಜು ರೇವಣಕರ,ಎಮ್.ಎ.ದೊರೆಗೋಳ,ಎಸ್,ಎಸ್,ಚಿತ್ತವಾಡಗಿ, ಎಸ್.ಬಿ.ಬಂಕದ, ಕಲ್ಲಪ್ಪ ತೋರತ,ಎಸ್, ಜಿ, ಜಳಜಿ, ನಗರಸಭೆ ಸದಸ್ಯೆ ಸವಿತಾಲಂಕೆನ್ನವರ,ಬಿ,ಎಸ್,ಕಳ್ಳಿಗುಡ್ಡ,ರುದ್ರಪ್ಪಮ್ಯಾಗಿನಹಳ್ಳಿ,ಜಗದೀಶ ಅಕ್ಕಿಮರಡಿ, ರಾಮಣ್ಣ ಜುಮನಾಳ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts