ಚಿತ್ರದುರ್ಗ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಗರದೇವತೆ ಬರಗೇರಮ್ಮ ದೇವಿಗೆ ಸೋಮನಾಥೇಶ್ವರ ಸ್ವಾಮಿ ಮಾದರಿಯಲ್ಲಿ ಶುಕ್ರವಾರ ವಿಶೇಷ ಅಲಂಕಾರ ಸೇವೆ ನೆರವೇರಿತು.
ಮಹಾರುದ್ರನ ದೇಗುಲಗಳು ಹೊರತುಪಡಿಸಿ ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಕಾಳಿಕಮಠೇಶ್ವರಿ, ಗೌರಸಂದ್ರ ಮಾರಮ್ಮ ದೇಗುಲಗಳಲ್ಲೂ ಪೂಜೆಗಳು ನಡೆದವು. ಅನೇಕ ಸನ್ನಿಧಾನಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.