More

    ಸಿನಿಮಾ ನಿರ್ದೇಶಕನಿಗೆ ಟೋಪಿ ಹಾಕಿದ ಭೂಪ

    ಧಾರವಾಡ: ತಾನೊಬ್ಬ ಸೇನಾಧಿಕಾರಿಯಾಗಿದ್ದು, ತಾನು ಬಳಿಸಿದ ವಾಹನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ ನಂಬಿಸಿ ಸಿನಿಮಾ ನಿರ್ದೇಶಕರಿಗೆ ಟೋಪಿ ಹಾಕಿದ ಘಟನೆ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಸಿನಿಮಾ ನಿರ್ದೇಶಕ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಅವರೇ ನಕಲಿ ಸೇನಾಧಿಕಾರಿಯಿಂದ ಮೋಸ ಹೋಗಿದ್ದಾರೆ.

    ಆನ್​ಲೈನ್​ನಲ್ಲಿ ವಾಹನಗಳನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಕಡಿಮೆ ಬೆಲೆಯಲ್ಲಿ ಬೊಲೆರೋ ವಾಹನ ಇರುವುದನ್ನು ಗಮನಿಸಿದ್ದಾರೆ. ನಂತರ ಅವರಿಗೆ ಮೆಸೇಜ್ ಮೂಲಕ ವಾಹನದ ಮಾಹಿತಿ ಕೇಳಿದ್ದಾರೆ. ಆಗ ಆತ ತಾನು ಸೇನಾಧಿಕಾರಿ ಎಂದು ಹೇಳಿದ್ದಲ್ಲದೆ, 1 ಲಕ್ಷ ರೂ.ಗೆ ನೀಡುವುದಾಗಿ ಹೇಳಿದ್ದಾನೆ. ನಾಸಿಕ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಿಲಿಟರಿ ಪಾರ್ಸಲ್ ಮೂಲಕ ಕಳುಹಿಸುವುದಾಗಿ ಹೇಳಿ ಸೇನಾ ಮುದ್ರೆಯ ರಸೀದಿಯನ್ನು ವಾಟ್ಸ್​ಪ್​ಗೆ ಕಳುಹಿಸಿದ್ದಾನೆ.

    ಇದನ್ನು ನಂಬಿದ ಶಂಕರ ಸಗುತೆ ಮೊದಲಿಗೆ 3 ಸಾವಿರ ರೂ. ಜಮೆ ಮಾಡಿದ್ದಾರೆ. ಇದಾದ ಬಳಿಕ ಆತ ಆಗಾಗ ಫೋನ್ ಮಾಡಿ ವಾಹನ ಧಾರವಾಡಕ್ಕೆ ಬರುತ್ತಿದೆ ಎಂದು ಧಾರವಾಡ ಬಳಿಯ ಊರುಗಳ ಹೆಸರನ್ನೇ ಹೇಳಿದ್ದರಿಂದ ಶಂಕರ ನಂಬಿದ್ದಾರೆ. ಬಳಿಕ 13 ಸಾವಿರ ರೂ. ಹಾಗೂ 17 ಸಾವಿರ ರೂ. ಹೀಗೆ ಒಟ್ಟು 34,550 ರೂ.ಗಳನ್ನು ಪೀಕಿದ್ದಾನೆ. ಒಂದು ವಾರ ಕಳೆದರೂ ವಾಹನ ಬಾರದ ಕಾರಣ ಆತನನ್ನು ಕೇಳಿದಾಗ ಮತ್ತೆ ಹಣ ಜಮೆ ಮಾಡಲು ಹೇಳಿದ್ದಾನೆ. ಇದರಿಂದ ಸಂಶಯಗೊಂಡ ಶಂಕರ ಸುಗತೆ ಅವರು ಫೆ. 12ರಂದು ಹುಬ್ಬಳ್ಳಿ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts