More

    ಸಿದ್ದರಾಮಯ್ಯ ವಿರುದ್ಧ ಠಾಣೆಗೆ ದೂರು : ಸಿಎಂಗೆ ಮಾಜಿ ಸಿಎಂ ಬೆದರಿಕೆ ಆರೋಪ

    ಮೈಸೂರು ತಾಲೂಕಿನ ತಿ.ನರಸೀಪುರ ಠಾಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಶುಕ್ರವಾರ ದೂರು ನೀಡಿದ್ದಾರೆ.
    ಕೊಡಗಿನಲ್ಲಿ ಮಾಧ್ಯಮದವರ ಜತೆ ಮಾತನಾಡುವ ಭರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಬೆದರಿಕೆ ಒಡ್ಡಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೀದಿಗಿಳಿಸಿದರೆ ಮುಖ್ಯಮಂತ್ರಿ ಕೂಡ ಓಡಾಡದಂತೆ ಆಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಅವರನ್ನು ಬಂಧಿಸಬೇಕು ಎಂದು ತೋಟದಪ್ಪ ಬಸವರಾಜು ಒತ್ತಾಯಿಸಿದ್ದಾರೆ.
    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮವಾರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾಎ. ಹಾಗಾಗಿ ಸಮಾಜದ ಹಿತವನ್ನು ಕದಡುವ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತ ದೂರಿದರು.
    ಬಿಜೆಪಿ ಮುಖಂಡರದ ರಂಗುನಾಯಕ್, ವೆಂಕಟ್ಟರಮಣ ಶೆಟ್ಟಿ , ಮಂಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts