ಅಥಣಿ ಗ್ರಾಮೀಣ: ಬಸ್ ಸ್ಟೇರಿಂಗ್ ರಾಡ್ ತುಂಡಾದ ಪರಿಣಾಮ ಸಾರಿಗೆ ಸಂಸ್ಥೆಯ ಬಸ್ಸೊಂದು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹಿರೇ ಹಳ್ಳದ ದಡದ ಗುಂಡಿಗೆ ಬಿದ್ದ ಪರಿಣಾಮ 25 ಪ್ರಯಾಣಿಕರಿಗೆ ಸಣ್ಣ&ಪುಟ್ಟ ಗಾಯಗಳಾದ ಟನೆ ಗುರುವಾರ ನಡೆದಿದೆ.
ಅಥಣಿಯಿಂದ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಕೊಕಟನೂರ&ಸಾವಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗುತ್ತಿದ್ದಾಗ ಸ್ಟೇರಿಂಗ್ ರಾಡ್ ತುಂಡಾಗಿ ರಸ್ತೆ ಪಕ್ಕದ ಗುಂಡಿಗೆ ಬಸ್ ಬಿದ್ದಿದೆ. ಬಸ್ ಗುಂಡಿಯಲ್ಲಿ ಉರುಳಿರುವುದನ್ನು ಕಂಡ ಅಕ್ಕ ಪಕ್ಕದ ಜನರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಅದರಲ್ಲಿದ್ದ ಬಸ್ ಚಾಲಕ ಪರಮೇಶ್ವರ ಐಗಳಿ, ನಿರ್ವಾಹಕ ಜಗದೀಶ ಬಬಲೇಶ್ವರ ಸೇರಿ 25 ಜನ ಪ್ರಯಾಣಿಕರನ್ನು ಹೊರ ತೆಗೆದಿದ್ದಾರೆ.
ಬಸ್ನಲ್ಲಿದ್ದ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸಣ್ಣ&ಪುಟ್ಟ ಗಾಯಗಳಾಗಿದ್ದವರನ್ನು ಕೊಕಟನೂರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ತಡೆಗೋಡೆ ನಿರ್ಮಿಸಲು ಆಗ್ರಹ: ಕೊಕಟನೂರಿನ ಹಿರೇ ಹಳ್ಳದ ಪಕ್ಕದಲ್ಲಿರುವ ಗುಂಡಿಯ ಪ್ರದೇಶದಲ್ಲಿ ತಡೆ ಗೋಡೆ ಇಲ್ಲ. ಕಾರಣ, ಈ ಪ್ರದೇಶದಲ್ಲಿ ಇಂತಹ ಅವಡಗಳು ಸಂಭವಿಸಲು ಕಾರಣವಾಗಿದೆ. ಈ ಹಿಂದೆ ಅನೇಕ ದ್ವಿಚಕ್ರ ಸವಾರರಿ ಬಿದ್ದ ಕೈ&ಕಾಲು ಮುರಿಗು ಕೊಂಡರು ಅಧಿಕಾರಿಗಳು ಎಚ್ಚೆತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಕೊಕಟನೂರದಿಂದ ಯಲ್ಲಮ್ಮವಾಡಿವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡುವ ಜತೆಗೆ ಹಿರೇ ಹಳ್ಳದ ಸುತ್ತ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.