More

    ಸಾಗವಾನಿ ಕದ್ದ ಆರು ಮಂದಿ ಬಂಧನ

    ಹಾನಗಲ್ಲ: ತಾಲೂಕಿನ ಗಡಿಯಂಕನಹಳ್ಳಿ ಗ್ರಾಮದ ವಂಶಿ ಫಾಮರ್್​ಹೌಸ್​ನಲ್ಲಿ ಕತ್ತರಿಸಿಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ 60 ಸಾಗವಾನಿ ಕಟ್ಟಿಗೆ ತುಂಡುಗಳನ್ನು ಕಳವು ಮಾಡಿದ್ದ 6 ಜನರನ್ನು ಹಾನಗಲ್ಲ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

    ಗಡಿಯಂಕನಹಳ್ಳಿ ಗ್ರಾಮದ ಆರೋಪಿಗಳಾದ ಮಾಲತೇಶ ನೀಲಪ್ಪ ಹರಿಜನ, ಮಲ್ಲೇಶಪ್ಪ ಚನಬಸಪ್ಪ ಕಳಲಿ, ಮಾಲತೇಶ ತಿಪ್ಪಣ್ಣ ಮನ್ನೂರ, ಅಭಿಷೇಕ ಪರಶುರಾಮ ಹರಿಜನ, ಕುಮಾರ ಹಾಲಪ್ಪ ರ್ಬಾ, ಕಾಳಪ್ಪ ಮಾನಪ್ಪ ಬಡಿಗೇರ ಬಂಧಿತರು. ಹಾವೇರಿ ನಿವಾಸಿ ಆರ್. ಪ್ರತಾಪ ಎಂಬುವವರಿಗೆ ಸೇರಿದ ಗಡಿಯಂಕನಹಳ್ಳಿ ಗ್ರಾಮದ ವಂಶಿ ಫಾಮರ್್​ನಲ್ಲಿ ಸಾಗವಾನಿ ಗಿಡಗಳನ್ನು ಕತ್ತರಿಸಿಡಲಾಗಿತ್ತು. ಸೆ.24 ರಂದು ರಾತ್ರಿ ಆರೋಪಿಗಳು ಸುಮಾರು 60 ನಾಟಾಗಳನ್ನು ಕದ್ದೊಯ್ದಿದ್ದರು.

    ಈ ಕುರಿತು ಹಾನಗಲ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಪಿಐ ಶಿವಶಂಕರ ಗಣಾಚಾರಿ ಅವರ ನೇತೃತ್ವದಲ್ಲಿ ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ಸಿಬ್ಬಂದಿ ಮಹೇಶ ಹೊರಕೇರಿ, ಕಿರಣ ಸಣ್ಣಗೌಡರ, ಜುಂಜಪ್ಪ ವಗ್ಗಣ್ಣನವರ, ಆನಂದ ಪಾಟೀಲ, ಆರ್.ಆರ್. ಬಳ್ಳಾರಿ, ಪಿ.ಬಿ. ಹೊಸಮನಿ, ಹನುಮಂತ ಜನಗೇರಿ, ಈರಣ್ಣ ಲಂಗೋಟಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ, ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ. ಕಟ್ಟಿಗೆಯನ್ನು ಕಳ್ಳತನ ಮಾಡಿದ ಐವರು ಹಾಗೂ ಕಟ್ಟಿಗೆಯನ್ನು ಖರೀದಿಸಿದ್ದ ಕಾಳಪ್ಪ ಬಡಿಗೇರ ಸಹಿತ ಆರು ಜನ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts