More

    ಸಾಗವಾನಿ ಕಟ್ಟಿಗೆ ಅಕ್ರಮ ಸಾಗಣೆ, ಇಬ್ಬರ ಸೆರೆ

    ಯಲ್ಲಾಪುರ: ಅಕ್ರಮವಾಗಿ ಸಾಗವಾನಿ ಕಟ್ಟಿಗೆ ಸಾಗಿಸುತ್ತಿದ್ದ ವಾಹನವೊಂದನ್ನು ಪಟ್ಟಣದ ತಟಗಾರ್ ಕ್ರಾಸ್ ಬಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

    ಅರಬೈಲಿನ ಶ್ರೀಧರ ಕೃಷ್ಣ ನಾಯ್ಕ ಹಾಗೂ ಶ್ರೀನಿವಾಸ ಕೃಷ್ಣಪ್ಪ ಗೌಡ ಬಂಧಿತರು. ಮತ್ತೊಬ್ಬ ಆರೋಪಿ ವಿಲಿಯಂ ಕೈತಾನ್ ಫರ್ನಾಂಡೀಸ್ ನಾಪತ್ತೆಯಾಗಿದ್ದಾನೆ. ಬಂಧಿತರಿಂದ 25000 ರೂ. ಬೆಲೆ ಬಾಳುವ 9 ಕ್ಯೂಬಿಕ್ ಮೀಟರ್ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಉದ್ಯಮನಗರದಲ್ಲಿರುವ ವಿಲಿಯಂ ಕೈತಾನ್ ಫರ್ನಾಂಡೀಸ್ ಅವರ ವುಡ್ ಇಂಡಸ್ಟ್ರಿಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಡಿಎಫ್​ಒ ಗೋಪಾಲಕೃಷ್ಣ ಹೆಗಡೆ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ ಎಂ. ಅವರ ನೇತೃತ್ವದಲ್ಲಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅಲ್ತಾಫ್ ಚೌಕಡಾಕ, ಅಶೋಕ ಶಿರಗಾವಿ, ಶ್ರೀನಿವಾಸ್ ನಾಯ್ಕ, ಸಿ.ಎಸ್. ನಾಯ್ಕ, ಸಂಜಯಕುಮಾರ ಬೋರಗಲ್ಲಿ, ಅರಣ್ಯ ರಕ್ಷಕರಾದ ಸಂತೋಷ ಕರಚಕಟ್ಟಿ, ಕಾಶಿನಾಥ ಯಂಕಂಚಿ, ದೇವರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts