ಸಾಗರ: ತಾಲೂಕಿನ ಚಿಕ್ಕನೆಲ್ಲೂರಿನಲ್ಲಿ ಸಂಗ್ರಹಿಸಿಡಲಾಗಿದ್ದ ಕಳ್ಳಭಟ್ಟಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹರೀಶ್ ಎಂಬುವರ ಮನೆಯಲ್ಲಿ ನಾಗಪ್ಪ ಎಂಬಾತ 150 ಮೀ. ಕಳ್ಳಭಟ್ಟಿ ಸಂಗ್ರಹಿಸಿ ಇಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಕಳ್ಳಭಟ್ಟಿ ವಶಕ್ಕೆ ಪಡೆದು, ನಾಶ ಪಡಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.