More

    ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ತರದ ಧುರೀಣ

    ಶಿರಸಿ: ಜೀವನದಲ್ಲಿ ಎಂದಿಗೂ ದುಷ್ಟಶಕ್ತಿಗೆ ತಲೆಬಾಗದೆ, ಇತರರಿಗೆ ಸಹಕಾರಿಯಾಗಿ ಬದುಕುತ್ತಿರುವ ಧುರೀಣ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಜೀವನವೇ ಇತರರಿಗೆ ಮಾದರಿ ಎಂದು ಶಿವಮೊಗ್ಗ ಕರ್ನಾಟಕ ರಾಜ್ಯ ಅಡಕೆ ಮಹಾಮಂಡಳಿ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಹೇಳಿದರು.

    ನಗರದ ಟಿಎಸ್​ಎಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಕಾರಿ ರತ್ನ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಜೀವನ ಸಾಧನೆಯನ್ನು ಒಳಗೊಂಡ ಸಹೃದಯಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರು ತಮ್ಮ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಅದರ ಲವಲೇಷವೂ ಸುಳಿಯದಂತೆ ಸಾಗುತ್ತಿದ್ದಾರೆ. ಸಂಘದ ಗ್ರಾಹಕರನ್ನು ಮನೆಯ ಸದಸ್ಯರಂತೆ ಪ್ರೀತಿಸುವ ಅವರ ಗುಣ ಮಾದರಿಯಾಗಿದೆ. ನಿರಂತರ ದುಡಿಯುವ ಉತ್ಸಾಹದ ಮನಸ್ಥಿತಿಯ ಅವರು ಸಾಕಷ್ಟು ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ ಎಂದರು.

    ಸಾಕಷ್ಟು ವರ್ಷಗಳಿಂದ ಸಹಕಾರಿ ಕ್ಷೇತ್ರಕ್ಕೆ ನಿಸ್ವಾರ್ಥವಾಗಿ ದುಡಿದಿರುವ, ದುಡಿಯುತ್ತಿರುವ ಹೆಗಡೆ ಅವರ ಮಾರ್ಗದರ್ಶನ ಸಹಕಾರಿ ರಂಗಕ್ಕೆ ಅಗತ್ಯವಾಗಿ ಸಿಗಬೇಕು ಎಂದು ಹೇಳಿದರು.

    ಸಂಪಾದಕ ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಸಂಘದ ಸದಸ್ಯರ ಹಿತವನ್ನೇ ತನ್ನ ಹಿತವರಂದು ಬದುಕಿದವರು ಶಾಂತಾರಾಮ ಹೆಗಡೆ. ಅವರು ತಮ್ಮ ಅಧಿಕಾರವನ್ನು ಎಂದಿಗೂ ಸಾರ್ವಜನಿಕರೆದುರು ಪ್ರದರ್ಶಿಸಿಲ್ಲ. ಎಲ್ಲವೂ ಇದ್ದ ಅವರು ಸಂತನಂತೆ ಸಂಘಕ್ಕಾಗಿ ಶ್ರಮಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

    ವಿಧಾನಸಭಾಧ್ಯಕ್ಷರು ಪುಸ್ತಕ ಬಿಡುಗಡೆ ಮಾಡಿದರು. ತೋಟಗಾರ್ಸ್ ಸೇಲ್ಸ್ ಸೊಸೈಟಿ (ಟಿಎಸ್​ಎಸ್)ಅಧ್ಯಕ್ಷ ಶಾಂತಾರಾಮ ಹೆಗಡೆ, ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇದ್ದರು. ಸಂಸ್ಥೆ ನಿರ್ದೇಶಕ ಶಶಾಂಕ ಹೆಗಡೆ ಸ್ವಾಗತಿಸಿದರು. ಸಿಬ್ಬಂದಿ ಗಿರೀಶ ಭಟ್ಟ ನಿರೂಪಿಸಿದರು. ಈ ವೇಳೆ ಸಂಘದ 50 ನಿಷ್ಠಾವಂತ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts