ಹುಬ್ಬಳ್ಳಿ: ನಗರದ ಸನ್ಸಿಟಿ ಹೆರಿಟೇಜ್ ಉದ್ಯಾನದಲ್ಲಿ ಸಮರ್ಥ ಭಾರತ, ವಸುಂಧರಾ ಫೌಂಡೇಶನ್ ಹಾಗೂ ಸನ್ಸಿಟಿ ಹೆರಿಟೇಜ್ ನಿವಾಸಿಗಳ ಸಹಯೋಗದಲ್ಲಿ ಪಂಚವಟಿ ನಿರ್ವಣದ ಸಂಕಲ್ಪ ಮಾಡಿ ವಿವಿಧ ಸಸಿಗಳನ್ನು ನೆಡಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಅಮರನಾಥ್, ಸುಧಾಕರ ಶೆಟ್ಟಿ, ಎಸ್.ಎಸ್. ಫೌಂಡೇಶನ್ ಸದಸ್ಯ ಸಂಕಲ್ಪ ಶೆಟ್ಟರ್, ಗ್ರೀನ್ ಕರ್ನಾಟಕ ಅಸೋಸಿಯೇಶನ್ನ ಚನ್ನು ಹೊಸಮನಿ, ವಿ ಕೇರ್ ಫೌಂಡೇಶನ್ನ ಗಂಗಾಧರ ಗುಜಮಾಗಡಿ, ಗ್ರೋ ಗ್ರೀನ್ ಪೆಡ್ಲರ್ಸ್ನ ಬಾಲಚಂದ್ರ ಡಂಗನವರ, ಕುರುಹಿನಶೆಟ್ಟಿ ಯುವಕ ಸಂಘದ ಶಿವಾನಂದ ಮುದೇನೂರ, ಬಡಾವಣೆಯ ಎ. ಶ್ರೀನಿವಾಸಲು, ವೀರೇಂದ್ರ ಪರಂಗಿ, ಅರುಣ ರೇವಣಕರ, ಆದಿತ್ಯಾ ಶಿತೋಳಿ, ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ, ಇತರರು ಇದ್ದರು.