More

    ಶ್ರೀಗಳಿಂದ ಪೂಗ ಪೂಜೆ ಸಂಪನ್ನ

    ಹೊಸನಗರ: ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ರಾಮೋತ್ಸವದ ಮೂರನೇ ದಿನ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಶೇಷವಾಗಿ ಹಮ್ಮಿಕೊಂಡಿದ್ದ ವಿವಿಧ ಧಾನ್ಯಗಳ ಪೂಗ ಪೂಜೆ ನೆರವೇರಿಸಿದರು.
    ಬುಧವಾರ ಬೆಳಗ್ಗೆಯಿಂದಲೇ ಶ್ರೀ ಮಠದಲ್ಲಿ ಅಖಂಡ ಭಜನೆಗೆ ಚಾಲನೆ ನೀಡಲಾಯಿತು. ಅಡಕೆ, ಭತ್ತ ಸೇರಿದಂತೆ ವಿವಿಧ ಧಾನ್ಯಗಳನ್ನು ವಿಶೇಷಾಲಂಕೃತಗೊಳಿಸಿ ಖುದ್ದು ಶ್ರೀಗಳೇ ಪೂಗ ಪೂಜೆ ನೆರವೇರಿಸಿದರು. 1008 ಧಾನ್ಯ ಕಳಸ ಪೂಜೆ, 100ಕ್ಕಿಂತ ಹೆಚ್ಚು ಮಹಾಪಾದುಕಾ ಪೂಜೆ, ಸಂಧ್ಯಾ ಮಂಗಲ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ, ಉತ್ಸವ ಸಂಪನ್ನಗೊಂಡಿತು. ಎಲ್ಲ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಿದ್ದ ರಾಘವೇಶ್ವರ ಶ್ರೀಗಳು ಮಂತ್ರಾಕ್ಷತೆ ನೀಡಿದರು.
    ಉತ್ಸವದಲ್ಲಿ ಪ್ರಧಾನಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಂ ಶಿವಮೊಗ್ಗ, ರಾಮೋತ್ಸವ ಸಮಿತಿ ಅಧ್ಯಕ್ಷ ಜಟ್ಟಿಮನೆ ಗಣಪತಿ ಭಟ್, ಕಾರ್ಯದರ್ಶಿ ಪಸನ್ನ ಉಡುಚೆ, ವಿಶ್ವೇಶ್ವರ ಸನ್ ಟೈಮï ಶಂಕರನಾರಾಯಣ ಮಾಗಲು, ಪ್ರಕಾಶ ಭಟ್ ಶಿವಮೊಗ್ಗ, ಶ್ರೀಕಾಂತ ಭಾಗಿ ಮತ್ತು ವಿವಿಧ ಭಾಗದಿಂದ ಆಗಮಿಸಿದ ಶ್ರೀಮಠದ ಪ್ರಮುಖರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts