More

    ಶಿಕ್ಷಣ ಕ್ಷೇತ್ರಕ್ಕೆ ತರಳಬಾಳು ಸಂಸ್ಥೆಯ ಕೊಡುಗೆ ಅಪಾರ – ವಾಮದೇವಪ್ಪ ಹೇಳಿಕೆ

    ದಾವಣಗೆರೆ: ಮಧ್ಯ ಕರ್ನಾಟಕದಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚಲು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
    ಆನಗೋಡು ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
    ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ದೂರದೃಷ್ಟಿಯ ಫಲವಾಗಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಐವತ್ತು ವರ್ಷಗಳ ಹಿಂದೆ ಶಿಕ್ಷಣ ಸಾರ್ವತ್ರಿಕ ವಾಗಿರಲಿಲ್ಲ. ನಗರಗಳಲ್ಲಿ ಮಾತ್ರ ಪ್ರೌಢಶಾಲೆಗಳಿದ್ದವು. ಅಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆದು ಉಚಿತ ಶಿಕ್ಷಣ ನೀಡಿದರು ಎಂದು ಸ್ಮರಿಸಿದರು.
    ತರಗತಿಯ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ನೀಡುವುದು ಶ್ರೀಗಳ ಆಶಯವಾಗಿತ್ತು. ಅದಕ್ಕಾಗಿ ಶ್ರೀಗಳು ಸ್ವತಃ ವಿದ್ಯಾರ್ಥಿಗಳು, ನೌಕರರೊಂದಿಗೆ ಸೇರಿ ಶ್ರಮದಾನ ಮೂಲಕ ಶಾಲಾ ಕಾಲೇಜುಗಳ ಕಟ್ಟಡಗಳನ್ನು ಕಟ್ಟಿದರು ಎಂದು ತಿಳಿಸಿದರು.
    ಶಾಲಾ ಮುಖ್ಯಶಿಕ್ಷಕ ಎಚ್.ರವಿ ಅಧ್ಯಕ್ಷತೆ ವಹಿಸಿದ್ದರು. ವರ್ಗಾವಣೆಗೊಂಡ ಮಂಜುನಾಥ್, ಮಾರುತೇಶ್, ಪ್ರಸನ್ನಕುಮಾರ್, ಬಾಬು ಬುಡೇನ್ , ಶಿವಕುಮಾರ ಅವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಗಮಿಸಿದ ಶಿಕ್ಷಕರಾದ ನಾಗರಾಜ ಸಿರಿಗೆರೆ, ವೇದಮೂರ್ತಿ, ಡಾ. ವಿಜಯ ಕುಮಾರ್, ಸುವರ್ಣ, ಪುಟ್ಟಪ್ಪನವರನ್ನು ಸ್ವಾಗತಿಸಲಾಯಿತು.
    ಸಮಾರಂಭದಲ್ಲಿ ಸುಭಾಷ್ ಮೆಳ್ಳೇಕಟ್ಟೆ, ಸಿಂಗಾಪುರ ಪರಮೇಶ್ವರಪ್ಪ ಇದ್ದರು.
    ಮಾನಸ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು, ಸಹ ಶಿಕ್ಷಕಿ ಕೆ ಎಸ್.ಮಮತಾ ಸ್ವಾಗತಿಸಿದರು. ವೇದಮೂರ್ತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts