More

    ಶಾಸಕ ಸ್ಥಾನಕ್ಕೆ ಸತೀಶ ರಾಜೀನಾಮೆ ನೀಡಲಿ – ಮಾರುತಿ ಅಷ್ಠಗಿ

    ಉಳ್ಳಾಗಡ್ಡಿ&ಖಾನಾಪುರ: ಹಿಂದು ಪದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಸತೀಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಬಿಜೆಪಿ ಮುಖಂಡ ಅಧ್ಯಕ್ಷ ಮಾರುತಿ ಅಷ್ಠಗಿ ಆಗ್ರಹಿಸಿದರು. ಯಮಕನಮರಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸತೀಶ ಜಾರಕಿಹೊಳಿ ಅವರು ಹಿಂದು ಧರ್ಮದ ಕುರಿತು ಅವಹೇಳನ ಮಾಡುತ್ತ ಬಂದಿದ್ದಾರೆ. ಅವರ ಹೇಳಿಕೆಯಿಂದ ಬಹುಸಂಖ್ಯಾತ ಜನರ ಧಾರ್ಮಿಕ ನಂಬಿಕೆ ಆಘಾತವಾಗಿದೆ ಎಂದರು.

    2023ರ ವಿಧಾನಸಭೆ ಚುನಾವಣೆಯಲ್ಲಿ ಸತೀಶ ಅವರನ್ನು ಸೋಲಿಸುವ ತನಕ ಹಿಂದು ಕಾರ್ಯಕರ್ತರು ವಿರಮಿಸುವುದಿಲ್ಲ. ಆಗಿರುವ ಟನೆಗೆ ಕ್ಷಮೆಯಾಚಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡರಾದ ರವೀಂದ್ರ ಹಂಜಿ, ಈರಣ್ಣ ಗುರವ, ಕುಶಾಲಸಿಂಗ್​ ರಜಪೂತ, ಮಹಾದೇವ ಮಜತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts