More

    ಶಾಲ್ಮಲಾ ನದಿ ನೀರು ಸಂಗ್ರಹ

    ಧಾರವಾಡ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದ ಭೂಮಿಪೂಜೆ ಅಂಗವಾಗಿ ನಗರದ ಶಾಲ್ಮಲಾ ನದಿಯ ಜಲವನ್ನು ಅಯೋಧ್ಯೆಗೆ ಕಳುಹಿಸುವ ನಿಟ್ಟಿನಲ್ಲಿ ನಗರದ ಶಾಲ್ಮಲಾ ಉಗಮ ಸ್ಥಾನದಲ್ಲಿ ಭಾನುವಾರ ಗಂಗಾಪೂಜೆ ನಡೆಸಿ ಪವಿತ್ರ ಗಂಗಾಜಲವನ್ನು ಶೇಖರಣೆ ಮಾಡಲಾಯಿತು. ನಗರದ ವೀರ ಸಾವರಕರ ಗೆಳೆಯರ ಬಳಗದ ವತಿಯಿಂದ ಈ ಕಾರ್ಯಕ್ರಮ ನಡೆಸಿದ್ದು, ನಗರದ ಎಲ್ಲ ರಾಮ ಭಕ್ತರ ಆಶಯದಂತೆ ಈ ಕಾರ್ಯ ನಡೆಸಲಾಗುತ್ತಿದೆ. ಆರ್​ಎಸ್​ಎಸ್ ಮುಖಂಡ ಶ್ರೀಧರ ನಾಡಗೀರ ಅವರು ಗಂಗಾಪೂಜೆ ನೆರವೇರಿಸಿ ಗಂಗಾ ಶೇಖರಣೆ ಮಾಡಿದರು. ಕರ ಸೇವಕರಾದ ಉದ್ಧವ ಗದಗಕರ್, ರವಿ ಯಲಿಗಾರ, ಭಾಸೂರಾನಂದ ಕುಲಕರ್ಣಿ, ಶರಣು ಅಂಗಡಿ, ವಿಷ್ಣು ಹುಕ್ಕೇರಿ, ಸುದರ್ಶನ, ವೀರ ಸಾವರಕರ ಗೆಳೆಯರ ಬಳಗದ ಪದಾಧಿಕಾರಿಗಳು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts