More

    ವಿವಿಧ ಕಾಲೇಜ್​ಗಳಲ್ಲಿ ಗುರಿಕಾರ ಪ್ರಚಾರ

    ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ರಂಗೇರಿದೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ನಗರದ ವಿವಿಧ ಕಾಲೇಜ್​ಗಳಿಗೆ ತೆರಳಿ ಗುರುವಾರ ಪ್ರಚಾರ ನಡೆಸಿದರು.

    ಜಿಲ್ಲಾ ಆಸ್ಪತ್ರೆ, ಹಿರೆಮಲ್ಲೂರ ಕಾಲೇಜ್, ಸಿದ್ಧರಾಮೇಶ್ವರ ಕಾಲೇಜ್, ಐಸಿಎಸ್ ಮಹೇಶ ಪಿಯು ಕಾಲೇಜ್, ಅಣ್ಣಿಗೇರಿ ಕಾಲೇಜ್, ಕೃಷಿ ವಿಶ್ವವಿದ್ಯಾಲಯ ಹಾಗೂ ಅಮ್ಮಿನಬಾವಿ, ಉಪ್ಪಿನ ಬೇಟಗೇರಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಎಸ್.ಕೆ. ರಾಮದುರ್ಗ, ಗಿರೀಶ ಪಾಟೀಲ, ಎಸ್.ಎಸ್. ಕಣವಿ, ಶಿವಾನಂದ, ಇತರರು ಇದ್ದರು.

    ಉಪ್ಪಿನ ಬೆಟಗೇರಿ ಪದವೀಧರರು ಗ್ರಾಮದ ಹಿರಿಯ ನರಗುಂದ ಅವರ ಮನೆಯಲ್ಲಿ ಸೇರಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ಸೂಚಿಸಿ, ಗೆಲುವು ನಿಶ್ಚಿತ ಎಂದರು.

    ಹುಬ್ಬಳಿಯ ಹೆಗ್ಗೇರಿ, ಗಣೇನಗರ, ಕೆಎಚ್​ಬಿ ಕಾಲನಿ, ಬಸವೇಶ್ವರನಗರ, ರಾಮಲಿಂಗೇಶ್ವರನಗರ, ಲಕ್ಷ್ಮೀ ಲೇಔಟ್, ನೆಹರುನಗರ, ಸಹದೇವನಗರ, ಗಾಂಧಿನಗರ ಹಾಗೂ ವಿವಿಧ ಓಣಿಗಳಲ್ಲಿ ಪ್ರಚಾರ ಮಾಡಿದರು. ಮತ್ತೊಂದೆಡೆ ಗುರಿಕಾರ ಪರವಾಗಿ ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿವಿಧ ತಂಡಗಳು ಪ್ರಚಾರ ಕಾರ್ಯ ನಡೆಸಿದವು. ರಾಧಿಕಾ ಕೆಂಗಾರ, ಶಂಕರ ಉಪ್ಪಿನ ರಾಘು ಕಠಾರೆ, ಜಯಶ್ರೀ, ಗಂಗಾಧರ, ಸಿದ್ಧಾರ್ಥ, ನಾರಾಯಣ, ಶ್ರೀನಿವಾಸ, ಮಹೇಶ, ಪ್ರದೀಪ್, ರಾಮು, ಕಿರಣ, ಇತರರು ಇದ್ದರು. ಹಾವೇರಿಯ ಕೊಣನತಂಬಿಗಿ, ಮೇಲ್ಮುರಿ, ಹಂದಿಗನೂರು ಗ್ರಾಮಗಳಲ್ಲಿ ವೇಣುಗೋಪಾಲ, ಶಂಕರ ಸಾವೂರ, ಇತರರು ಪ್ರಚಾರ ನಡೆಸಿದರು. ಜೋಯಿಡಾ ಮತ್ತು ದಾಂಡೇಲಿಯಲ್ಲಿ ರವಿಕುಮಾರ ಜಮಖಂಡಿ ತಂಡ ಪ್ರಚಾರ ಕಾರ್ಯ ಮಾಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts