More

    ಡಿಎನ್ ಅಕ್ಕಿಗೆ ಪರಿಷತ್ತಿನಿಂದ ಅಧಿಕೃತ ಆಹ್ವಾನ


    ಯಾದಗಿರಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಅವರಿಗೆ ಇಂಡಿ ಪಟ್ಟಣದಲ್ಲಿ ಗುರುವಾರ ಶಹಾಪುರ ಕಸಾಪದಿಂದ ಅಧಿಕೃತ ಆಹ್ವಾನ ನೀಡಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯ ಬದುಕಿನ ಪ್ರೀತಿ, ಪ್ರೇಮ, ಮಾನವೀಯ ಮೌಲ್ಯಗಳನ್ನು ಹಂಚುವುದೇ ಸಾಹಿತ್ಯದ ಪ್ರಮುಖ ಆಶಯವಾಗಿದೆ. ಸಗರನಾಡಿನ ಹಿರಿಯ ಸಾಹಿತಿಗಳು ತಮ್ಮ ಅಮೂಲ್ಯ ಕೃತಿಗಳ ಮೂಲಕ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅದರಲ್ಲಿ ನನ್ನದೊಂದು ಅಲ್ಪ ಸೇವೆ ಮಾತ್ರ ಎಂದರು.

    ಪ್ರತಿಭೆಯ ಸಾಧನೆಗೆ ಜಾತಿ, ಮತ, ಪಂಥದ ಬಣ್ಣ ಹಚ್ಚಬಾರದು. ಪ್ರತಿಭೆ ಯಾವುದೇ ಇರಲಿ ಅದು ನಾಡಿನ ಸಾರಸ್ವತ ಲೋಕದ ಸಂಪತ್ತು ಎಂಬುದು ಮರೆಯಬಾರದು. ಶಹಾಪುರದ ಸಾಂಸ್ಕೃತಿಕ ಪರಿಸರದಲ್ಲಿ ಐತಿಹಾಸಿಕ ಪರಂಪರೆ ಸಾರುವ ಶಾಸನಗಳು, ಸ್ಮಾರಕಗಳು ಉಳಿಸಿ ಬೆಳೆಸಲು ಶಹಾಪುರ ನಗರದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ತಿಳಿಸಿದರು.

     ಪರಿಷತ್ ಅಧ್ಯಕ್ಷ  ಡಾ.ರವೀಂದ್ರನಾಥ ಹೊಸ್ಮನಿ, ಹಿರಿಯ ಸಂಶೋಧಕ, ಸಾಹಿತಿ ಡಿ.ಎನ್.ಅಕ್ಕಿ ಅವರ ವ್ಯಕ್ತಿತ್ವ  ಮತ್ತು ಸಾಧನೆ ನಮಗೆ ಮಾದರಿ. ಸವರ್ಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅವರ  ವ್ಯಕ್ತಿತ್ವಕ್ಕೆ  ಹಿಡಿದ ಕನ್ನಡಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts