More

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

    ಕೆ.ಆರ್.ನಗರ: ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಾ.ರಾ.ಮಹೇಶ್ ಭೂಮಿ ಪೂಜೆ ನೆರವೇರಿಸಿದರು.

    1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ಮಾರಿಗುಡಿ, 10 ಲಕ್ಷ ರೂ.ನಲ್ಲಿ ರಾಮಮಂದಿರ ಕುರ್ಜು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 20 ಲಕ್ಷ ರೂ. ವೆಚ್ಚದಲ್ಲಿ ನಾಡಕಚೇರಿ, 65 ಲಕ್ಷ ರೂ.ಗಳಲ್ಲಿ ರೈತ ಸಂಪರ್ಕ ಕೇಂದ್ರ, 50 ಲಕ್ಷ ರೂ.ನಲ್ಲಿ ನಿರ್ಮಿಸಿರುವ ವಿದ್ಯುತ್ ಇಲಾಖೆ ಉಪಕೇಂದ್ರ ಉದ್ಘಾಟಿಸಲಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಶೈಲಜಾ ಮಂಜುನಾಥ್, ಸದಸ್ಯರಾದ ಮನು, ಮಂಜುಳಾ ಗಿರೀಶ್, ಕಾಂತರಾಜು, ರವಿಕುಮಾರ್, ಭವ್ಯಾ, ಪುಷ್ಪಾ, ಮಾಜಿ ಸದಸ್ಯರಾದ ಮಾದೇಗೌಡ, ಎಂ.ಮಂಜು, ಇಒ ಎಚ್.ಕೆ.ಸತೀಶ್, ಜೆಡಿಎಸ್ ಮುಖಂಡರಾದ ಸುಜಯ್ ಕುಮಾರ್, ಎಚ್.ಪಿ.ಶಿವಣ್ಣ, ಟೌನ್ ಹರೀಶ್, ಕಪ್ಪಡಿ ಹರೀಶ್, ಮಧು, ಪಿಡಿಒ ನೇತ್ರಾವತಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts