More

    ವಿದ್ಯಾರ್ಥಿಗಳು ವ್ಯಕ್ತಿ ವಿಕಸನಕ್ಕೆ ಶ್ರಮಿಸಿ

    ನಿಪ್ಪಾಣಿ: ಕೇವಲ ಪರೀಕ್ಷೆಗಾಗಿ ಓದದೆ, ವ್ಯಕ್ತಿ ವಿಕಸನಕ್ಕೆ ಕಠಿಣ ಪರಿಶ್ರಮದೊಂದಿಗೆ ಅಧ್ಯಯನ ನಡೆಸಿದಾಗ ಯಾವುದೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು ಎಂದು ವಿದ್ಯಾ ಸಂವರ್ಧಕ ಮಂಡಳ ಶೈಕ್ಷಣಿಕ ಸಮೂಹದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.

    ಇಲ್ಲಿನ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ವಿಎಸ್‌ಎಂ ಕನ್ವೆನ್ಶನ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಎಸ್‌ಎಂ ಜಿ.ಐ.ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗುರುಗಳ ಸಹಾಯದೊಂದಿಗೆ ಗುರಿ ತಲುಪಲು ಪ್ರಯತ್ನಿಸಿ. ಪಾಲಕರಿಗೆ, ಕಲಿತ ಸಂಸ್ಥೆಗೆ, ಸಮಾಜಕ್ಕೆ ಕೀರ್ತಿ ತರಬೇಕು. ಯೋಗ, ಧ್ಯಾನ, ಪ್ರಾಣಾಯಮದೊಂದಿಗೆ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮಂಡಳದ ವೈಸ್-ಚೇರ್ಮನ್ ಆರ್.ವೈ.ಪಾಟೀಲ ಮಾತನಾಡಿ, ಮಂಡಳದಿಂದ ನೀಡುತ್ತಿರುವ ಅವಶ್ಯಕ ಸೌಲಭ್ಯ ಸದುಪಯೋಗ ಪಡೆದು ವಿದ್ಯಾರ್ಥಿಗಳು ಸ್ವಾವಲಂಭಿಯಾಗಿ ಬದುಕಲು ಕಲಿಯಿರಿ ಎಂದರು.

    ಸಾಧಕರಿಗೆ ಸನ್ಮಾನ: ಸಿಇಒ ಡಾ. ಸಿದ್ದಗೌಡ ಪಾಟೀಲ ವೃತ್ತಿ ಮಾರ್ಗದರ್ಶನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಚಾರ್ಯ ಡಾ. ನಿಂಗಪ್ಪ ಮಾದಣ್ಣವರ ವಾರ್ಷಿಕ ವರದಿ ವಾಚಿಸಿದರು. ಆರ್‌ಸಿಯು ವಿದ್ಯಾ ವಿಷಯಕ್ ಪರಿಷತ್ ಸಭೆ ಸದಸ್ಯತ್ವಕ್ಕೆ ನಾಮನಿರ್ದೇಶನಗೊಂಡ ಡಾ. ಸಿದ್ದಗೌಡ ಪಾಟೀಲ ಹಾಗೂ ಅಶ್ವಿನಿ ಪಾಟೀಲ ದಂಪತಿ, ಬಿಸಿಎ ಪರೀಕ್ಷೆಯಲ್ಲಿ 3ನೇ ರ‌್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ ಜತ್ರಾಟೆ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ಸೀಮಾ ಪಾಟೀಲ ಅವರನ್ನು ಪಾಲಕರ ಸಹಿತ ಹಾಗೂ ಕಳೆದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರಥಮೇಶ ಹಜಾರೆ, ಶಿವಾನಿ ಪಾಟೀಲ, ಭಾರತ ಲವಟೆ ಅವರನ್ನು ಸತ್ಕರಿಸಲಾಯಿತು.

    ವೀರಾಗ್ರಣಿ ಪ್ರಶಸ್ತಿ ಪಡೆದ ವಾಣಿಜ್ಯ ವಿಭಾಗದ ಶ್ರದ್ಧಾ ಪಾಟೀಲ, ಪ್ರದೀಪ ತೇಲಿ, ನವಾಜ ಕುಮನಾಳಿ, ಪ್ರಿಯಾಂಕಾ ಕಾಂಬಳೆ, ಕಲಾ ವಿಭಾಗದ ಸಿದ್ಧಾರ್ಥ ಕರನೂರೆ, ಶಿವುತಾಯಿ ಬನ್ನೆ, ವಿಜ್ಞಾನ ವಿಭಾಗದ ಮಧುರಾ ಗಾಯಕವಾಡ, ಆಕಾಶ ಕದಂ, ಪ್ರಾಜಕ್ತಾ ಸಾಠೆ, ಕೇತನ ಖೋತ, ಸೀಮಾ ಪಿಸೂತ್ರೆ, ಮಯೂರ ಕುಂಬಾರ ಇತರರಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹುಕ್ಕೇರಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎನ್.ನಾಯ್ಕ, ಮಜಲಟ್ಟಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವಿಶ್ವನಾಥ ಚೌಗುಲಾ, ಉಪನ್ಯಾಸಕ ಪಿ.ಎ.ಪಾಯಮಲ್ಲೆ, ಆರತಿ ಕೋಳಿ, ಸುಕೇಶನಿ ಖೋತ, ಸವಿತಾ ಬನ್ನೆ ಮಾತನಾಡಿದರು. ಮಂಡಳದ ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಮಹಾವಿದ್ಯಾಲಯದ ಉಸ್ತುವಾರಿ ಚೇರ್ಮನ್ ರಾವಸಾಹೇಬ ಪಾಟೀಲ, ವಿಜ್ಞಾನ ವಿಭಾಗದ ಮುಖ್ಯಸ್ಥ ಅಜೀತಕುಮಾರ ಮೋರೆ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸರೋಜಿನಿ ಸಮಾಜೆ, ವಿರೂಪಾಕ್ಷ ವಡ್ಡಗೋಳ, ಸಂಜಯ ಮುತ್ನಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts