More

    ವಿಕಾಸದ ಹಾದಿಯಲ್ಲಿಡಬಲ್ ಇಂಜಿನ್ ಸರ್ಕಾರ; ಪ್ರಧಾನಿ ನರೇಂದ್ರ ಮೋದಿ

    ಹಾವೇರಿ: ನಗರದಲ್ಲಿ ಆಯೋಜಿಸಿದ್ದ ಬಿಜೆಪಿ‌ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತ್ ಮಾತಾಕಿ‌, ಭಜರಂಗಬಲಿ ಕಿ ಜೈ
    ಹಾಗೂ ಸರ್ವಜ್ಞ ಮತ್ತು ಕನಕದಾಸರ ನಾಡು ಹಾವೇರಿ ಜನತೆಗೆ ನನ್ನ‌ ನಮಸ್ಕಾರಗಳು ಎನ್ನುವ ಮೂಲಕ ಮಾತು ಆರಂಭಿಸಿದರು.

    ಇಷ್ಟು ದೊಡ್ಡ ಸಂಖ್ಯೆಯಲ್ಲಿ ‌ಬಂದಿರುವುದಕ್ಕೆ ನಿಮಗೆ ಹೃದಯಪೂರ್ವಕ ನಮನ ತಿಳಿಸುವೆ.

    ಕಾಂಗ್ರೆಸ್ ನ ಎಲ್ಲ ಸುಳ್ಳುಗಳು ಬಿಜೆಪಿಯ ಅಲೆಯಲ್ಲಿ ಹೋಗಿವೆ. ಕಾಂಗ್ರೆಸ್ ನ ತುಷ್ಟೀಕರಣ ಹಾಗೂ ಕೆಟ್ಟ ನೀತಿಗಳು ಜನರಿಗೆ ತಿಳಿದಿವೆ.

    ಒಬಿಸಿ, ಲಿಂಗಾಯತ ಎಲ್ಲರ ಮೇಲೆ ಕಾಂಗ್ರೆಸ್ ಗೆ ಸಿಟ್ಟುಇದೆ. ಹಾಗಾಗಿ ಜನ ಸಂಕಲ್ಪ ಮಾಡಿದ್ದಾರೆ. ಕರ್ನಾಟಕದ ಎಲ್ಲ‌ ಊರು, ಗಲ್ಲಿಗಳಲ್ಲಿ ಒಂದೇ ಧ್ವನಿ‌ಕೇಳುತ್ತಿದೆ. ಈ ಭಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು..

    ಸಹೋದರ‌ ಸಹೋದರಿಯರೇ.. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ರಾಜ್ಯದಲ್ಲೂ ಆಡಳಿತ ಮಾಡಿದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ‌ ಅವರ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಮೂರೂವರೆ ವರ್ಷದಲ್ಲಿ ಉತ್ತಮ ಕೆಲಸ ಮಾಡಿದೆ.

    ಹಾವೇರಿ ವಿಕಾಸದ ಹಾದಿಯಲ್ಲಿ
    ಡಬಲ್ ಇಂಜಿನ್ ಸರ್ಕಾರ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಮೆಗಾ ಡೇರಿ, ನೂತನ ವಿಶ್ವವಿದ್ಯಾಲಯ, ರಸ್ತೆ ರೈಲು ಸಂಪರ್ಕದ ಕೆಲಸ‌ ಮಾಡಿದೆ. ಆರು‌ ಪಥದ ಚಿತ್ರದುರ್ಗ ದಾವಣಗೆರೆ ಹುಬ್ಬಳ್ಳಿ ಹೈವೆ ನಿರ್ಮಿಸಿದೆ.

    ವಿಕಾಸದ ಈ ಕಾರ್ಯವನ್ನು ಕಾಂಗ್ರೆಸ್ ಕೂಡ ಮಾಡಬಹುದಿತ್ತು.‌ ಆದರೆ ಅವರು ಏನೂ ಮಾಡಲಿಲ್ಲ. ಯಾಕೆ‌ ಗೊತ್ತಾ.. ಕಾಂಗ್ರೆಸ್ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ. ಕಾಂಗ್ರೆಸ್ ೮೫% ಕಮಿಷನ್, ಅಂತಂಕವಾದಿ ಜತೆ ಇರುವ, ತುಷ್ಟೀಕರಣದ ಪಕ್ಷ, ಕಾಂಗ್ರೆಸ್ ರಾಜ್ಯದಲ್ಲಿ ವಿಕಾಸ ಆಗಲ್ಲ. ಎಲ್ಲ ಹಣವನ್ನೂ ಅವರೇ ಲೂಟಿ ಮಾಡುತ್ತಾರೆ.

    ಕಾಂಗ್ರೆಸ್ ರಾಜ್ಯದ ರೈತರ ೮೫%ರಷ್ಟು ಹಣ ಲೂಟಿ ಹೊಡೆದಿದೆ. ಯೂರಿಯಾ ಗೊಬ್ಬರದ ಹೆಸರಲ್ಲೂ ಲೂಟಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇದನ್ನೆಲ್ಲ ತಪ್ಪಿಸುವ ಕೆಲಸ ಮಾಡಿದೆ ಎಂದು ಮೋದಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts