More

    ಲೋಕಿಕೆರೆಯಲ್ಲಿ ಚುಟುಕು ಕ್ರಿಕೆಟ್ ಟೂರ್ನಿ- ಸಂತೇಬೆನ್ನೂರು ತಂಡಕ್ಕೆ ಬಹುಮಾನ 

    ದಾವಣಗೆರೆ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ಮೂರು ದಿನಗಳ ಕಾಲ ತಾಲೂಕಿನ ಲೋಕಿಕೆರೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂತೇಬೆನ್ನೂರು ತಂಡ ಪ್ರಥಮ ಸ್ಥಾನ ಪಡೆಯಿತು.

    ಲೋಕಿಕೆರೆ ಮಾರುತಿ ಕ್ರಿಕೆಟ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಲೋಕಿಕೆರೆ ತಂಡ ದ್ವಿತೀಯ, ಲೋಕಿಕೆರೆ ಸೈಟ್ ತೃತೀಯ ಸ್ಥಾನ ಪಡೆದುಕೊಂಡಿತು.
    ಮೂರೂ ತಂಡಗಳಿಗೆ ಕ್ರಮವಾಗಿ 20 ಸಾವಿರ ರೂ, 12500 ರೂ, 7500 ರೂ. ಬಹುಮಾನದ ಜತೆಗೆ ಟ್ರೋಫಿಗಳನ್ನು ನೀಡಲಾಯಿತು. ಬಿಜೆಪಿ ಮುಖಂಡ ಜಿ.ಎಸ್.ಶ್ಯಾಮ್, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಸದಸ್ಯ ಬಿ.ಟಿ. ಸಿದ್ದಪ್ಪ, ಜಿ.ಎಸ್. ರಾಘವೇಂದ್ರ ಕ್ರಮವಾಗಿ ಈ ಬಹುಮಾನಗಳ ದಾನಿಗಳಾಗಿದ್ದರು.
    ಬಿ.ಟಿ. ಸಿದ್ದಪ್ಪ, ಲೋಕಿಕೆರೆ ತಾಪಂ ಸದಸ್ಯ ಸಿ.ಗುರುಮೂರ್ತಿ, ಬಿಜೆಪಿ ಮಾಯಕೊಂಡ ಬ್ಲಾಕ್ ಎಸ್ಟಿ ಮೋರ್ಚಾ ಅಧ್ಯಕ್ಷ ಪ್ಯಾಟಿ ಹನುಮಂತಪ್ಪ, ಉಪಾಧ್ಯಕ್ಷ ಆರ್. ರಾಮಸ್ವಾಮಿ, ಮುಖಂಡರಾದ ಪವಾಡರಂಗವ್ವನಹಳ್ಳಿ ಶಿವಣ್ಣ, ಶಾಂತಪ್ಪ, ಲೋಕಿಕೆರೆ ಟಿ.ಸಿ. ಮೂರ್ತಿ ಬಹುಮಾನ ನೀಡಿದರು. ಪತ್ರಕರ್ತ ಪುರಂದರ ಲೋಕಿಕೆರೆ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts