More

    ರೈತ ಆತ್ಮಹತ್ಯೆ

    ಹಾನಗಲ್ಲ: ಸಾಲ ಬಾಧೆಯಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಾಗರವಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪರಶುರಾಮ ಯಲ್ಲಪ್ಪ ಬಾಳಿಹಳ್ಳಿ (ವಡ್ಡರ)(35) ಆತ್ಮಹತ್ಯೆ ಮಾಡಿಕೊಂಡ ರೈತ. 1 ಎಕರೆ 14 ಗುಂಟೆ ಜಮೀನು ಹೊಂದಿರುವ ಪರಶುರಾಮ, ಗೆಜ್ಜಿಹಳ್ಳಿ ಸಿಂಡಿಕೇಟ್ ಬ್ಯಾಂಕ್​ನಲ್ಲಿ 1.30 ಲಕ್ಷ ರೂ., ಟ್ರ್ಯಾಕ್ಟರ್ ಖರೀದಿಸಲು ಹಾವೇರಿಯ ಎಲ್ ಆಂಡ್ ಟಿ ಫೈನಾನ್ಸ್​ನಲ್ಲಿ 7.47 ಲಕ್ಷ ರೂ., ಹಿರೇಕೆರೂರಿನ ಶ್ರೀರಾಮ ಫೈನಾನ್ಸ್​ನಲ್ಲಿ 4 ಲಕ್ಷ ರೂ., ಇತರ ಹಣಕಾಸು ಸಂಸ್ಥೆಗಳಲ್ಲೂ ಸೇರಿ ಒಟ್ಟು 18 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts