More

    ರೇಸ್ ರಾಜನ್​ಗೆ ಆರ್ಥಿಕ ನೆರವು

    ಶಿವಮೊಗ್ಗ: ಸೈಕಲ್​ನಲ್ಲಿ 40,700 ಕಿ.ಮೀ. ಸಂಚರಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದ ರೇಸ್ ರಾಜನ್ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗದ ರಾಜನ್​ಗೆ ಶಿವಮೊಗ್ಗ ಸೈಕಲ್ ಕ್ಲಬ್​ನಿಂದ ಸನ್ಮಾನಿಸಿ ಆರ್ಥಿಕ ನೆರವು ನೀಡಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜನ್, ಮುಂದಿನ ದಿನಗಳಲ್ಲಿ ಹೆಚ್ಚು ದೂರ ಕ್ರಮಿಸುವ ಗುರಿ ಹೊಂದಿದ್ದೇನೆ. ಸೈಕಲ್ ಪ್ರಯಾಣದ ಆಸಕ್ತಿ ಹೊಂದಿದವರು ನನ್ನ ಜತೆಗೆ ಪಾಲ್ಗೊಳ್ಳಬಹುದು ಎಂದು ಹೇಳಿದರು.

    ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ರಾಜಸ್ತಾನ ಸೇರಿ ಬಹುತೇಕ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಸೈಕಲ್ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಿದ್ದೇನೆ ಎಂದರು.

    ಯೂತ್ ಹಾಸ್ಟೆಲ್ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯ್ಕುಮಾರ್ ಮಾತನಾಡಿ, ಸಾಹಸ ಕಾರ್ಯಗಳು ಎಂದರೆ ಅನೇಕರು ದೂರ ಉಳಿಯುತ್ತಾರೆ. ಆದರೆ ಕೆಲವರು ಸಾಹಸ ಮನೋಭಾವ ಮೈಗೂಡಿಸಿಕೊಂಡಿದ್ದಾರೆ. ಅಂಥವರಲ್ಲಿ ರೇಸ್ ರಾಜನ್ ಕೂಡ ಒಬ್ಬರು ಎಂದು ಹೇಳಿದರು.

    ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಪ್ರಮುಖರಾದ ಹರೀಶ್ ಪಟೇಲ್, ಸಂಜಯ್, ನಾಗರಾಜ್, ರವಿ, ಮನೋಜ್, ವಿಮಲ್, ಪ್ರಕಾಶ್, ಗುರುಮೂರ್ತಿ, ನರಸಿಂಹಮೂರ್ತಿ, ಜಗದೀಶ್, ನಾಗೇಂದ್ರ, ರಾಹುಲ್ ನಾಡಿಗ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts