More

    ರಾಷ್ಟ್ರಮಟ್ಟದ ಆಚರಣೆಗೆ ಒತ್ತಾಯ

    ಚಿತ್ರದುರ್ಗ: ಓಬವ್ವ ನಾರಿಶಕ್ತಿಯ ಸಂಕೇತವಾಗಿದ್ದು, ರಾಷ್ಟ್ರಮಟ್ಟದಲ್ಲಿ ಜಯಂತ್ಯುತ್ಸವ ಆಚರಿಸುವಂತೆ ನಿಯೋಗ ತೆರಳಿ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಚಿತ್ರದುರ್ಗದಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪಿಸಿ, ವೀರವನಿತೆಯ ಹೆಸರಿಡಬೇಕು ಎಂದು ನಿವೃತ್ತ ಪ್ರಾಂಶುಪಾಲ ಎನ್.ತಿಪ್ಪೇಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಶನಿವಾರ ನಡೆದ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದರು.

    ಓಬವ್ವ ದುರ್ಗದ ರಕ್ಷಕಿ ಎಂದೇ ಪ್ರಸಿದ್ಧ ಪಡೆದಿದ್ದು, ವಿ.ಡಿ.ಕೃಷ್ಣ ಅವರು ಆಕೆಯ ಸಾಹಸಗಾಥೆ ಕುರಿತು ಬರೆಯದಿದ್ದರೆ ಗತಕಾಲದಲ್ಲಿ ಹುದುಗಿ ಹೋಗುತ್ತಿದ್ದರು. ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ ಅವರು ಚಂದ್ರವಳ್ಳಿ ಪುಸ್ತಕದಲ್ಲಿ ರಣಚಂಡಿಯಂತೆ ಶತ್ರುಗಳನ್ನು ಚಂಡಾಡಿದ ವೀರ ಮಹಿಳೆ ಎಂದು ಬಣ್ಣಿಸುವ ಮೂಲಕ ಮಾಹಿತಿ ದಾಖಲಿಸಿದ್ದಾರೆ. ಹೀಗಾಗಿ ಇತಿಹಾಸದ ಪುಟಗಳಲ್ಲಿ ಉಳಿಯುವಂತಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts