More

    ರಾಷ್ಟ್ರಧ್ವಜಕ್ಕೆ ಪಡೆದಿದ್ದ ಹಣ ವಾಪಸ್

    ಚಿಕ್ಕಮಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಜನರು ಹಣ ಕೊಟ್ಟು ಖರೀದಿಸಿ ಮನೆ ಮೇಲೆ ಹಾರಿಸಿದ್ದ ಧ್ವಜಗಳಿಗೆ ನಗರಸಭೆ ಸದಸ್ಯರು ಹಣ ಕೊಟ್ಟರು. ಮನೆಗಳ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜಗಳನ್ನು ಜನರೇ ಗೌರವ ಪೂರ್ವಕವಾಗಿ ಅವರೋಹಣ ಮಾಡಿದರು. ಮೂರು ದಿನಗಳ ಹಿಂದೆ ನಗರದಲ್ಲಿ ಸಹಸ್ರಾರು ಮನೆಗಳ ಮೇಲೆ ಕಟ್ಟಲಾಗಿದ್ದ ಧ್ವಜವನ್ನು ಸೋಮವಾರ ಸಂಜೆ ಇಳಿಸಲಾಯಿತು. ದಂಟರಮಕ್ಕಿ ಬಡಾವಣೆಯಲ್ಲಿ ನಗರಸಭೆ ಸದಸ್ಯ ಮೋಹನ್​ಕುಮಾರ್ ಮತ್ತು ತಂಡ ಮನೆಗಳಲ್ಲಿ ಕಟ್ಟಿದ್ದ ರಾಷ್ಟ್ರಧ್ವಜ ಇಳಿಸಿ ಧ್ವಜ ನೀಡಬೇಕಾದರೆ ಪಡೆದಿದ್ದ ಹಣವನ್ನು ಜನರಿಗೆ ಹಿಂದುರುಗಿಸಿದರು.

    ಮೋಹನ್​ಕುಮಾರ್ ಮಾತನಾಡಿ, ಸೋಮವಾರ ಧ್ವಜ ಹಿಂಪಡೆದು ಅವರ ಹಣವನ್ನು ನಾವೇ ಹಿಂದಿರುಗಿಸಿ ಧ್ವಜವನ್ನು ನಗರಸಭೆ ಹಸ್ತಾಂತರಿಸುತ್ತಿದ್ದೇವೆ ಎಂದರು. ನಗರದ ವಿವಿಧ ವೃತ್ತಗಳು, ಶಾಲಾ ಕಾಲೇಜುಗಳಲ್ಲಿ ಹಾಕಲಾಗಿದ್ದ ಫ್ಲ್ಲೆಕ್ಸ್, ತಿರಂಗಾ ಟೇಪ್, ವಿದ್ಯುತ್ ದೀಪಾಲಂಕಾರವನ್ನು ಮಂಗಳವಾರ ತೆರವುಗೊಳಿಸಲಾಯಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts