More

    ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಉಚ್ಛಾಟನೆ ಕವನ್ ಗೌಡ ಆಗ್ರಹ

    ಹಾಸನ: ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಅವರ ಮೇಲೆ ದೂರನ್ನು ಎಸ್.ಐ.ಟಿ.ಗೆ ನೀಡುವಂತೆ ಸಕಲೇಶಪುರದ ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ ಆಗ್ರಹಿಸಿದರು.
    ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಅಲ್ಲಿಯ ಕಾಂಗ್ರೆಸ್ ಕಾರ್ಯಕರ್ತರ ಅಶ್ಲೀಲವಾದ ವಿಡಿಯೋ ಕಾಲ್ ಮಾಡುತ್ತಿರುವ ತುಣುಕು ಹರಿದಾಡುತ್ತಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಇನ್ನು ಏಕೆ ಸುಮ್ಮನೆ ಕುಳಿತಿದೆ. ಇನ್ಪಾರ್ಮೆಷನ್ ಆಕ್ಟ್ 67ಎ. ನಲ್ಲಿ ಈ ಕೃತ್ಯ ಎಸಗಿದವರಿಗೆ ಐದು ವರ್ಷಗಳ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜಿಲ್ಲೆಯ ಪೆನ್ ಡ್ರೈವ್ ಪ್ರಕರಣವನ್ನು ವಹಿಸಿಕೊಂಡಿರುವ ಎಸ್.ಐ.ಟಿ. ಯು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನಲ್ಕೆ ನವೀನನ್ನು ಏಕೆ ಬಂಧಿಸಲಿಲ್ಲ. ಯಾರ ರಕ್ಷಣೆಯಲ್ಲಿ ಇದ್ದಾರೆ ? ಕೂಡಲೇ ಬಂದಿಸಿ ಸತ್ಯಾಂಶವನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಆಗ್ರಹಿಸಿದರು. ಪೆನ್ ಡ್ರೈವ್ ಎಲ್ಲಿಂದ ಬಂತು? ಯಾರು ಕೊಟ್ಟವರು ಎಂಬುದನ್ನು ರಾಜ್ಯದ ಜನರ ಮುಂದೆ ಇಡಬೇಕು. ಮಾಹಿತಿ ತಂತ್ರಜ್ಞಾನ ಅಧಿನಿಯಮ, ವಿದ್ಯುದ್ಮಾನ ನಮೂನೆಯಲ್ಲಿ ಅಶ್ಲೀಲವಾದ ಮಾಹಿತಿಯನ್ನು ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದರು.
    ಲೈಂಗಿಕವಾಗಿ ಮುಚ್ಚು ಮರೆಯಿಲ್ಲದೆ ಕೃತ್ಯಗಳು ಮೊದಲಾದವುಗಳ ಒಳಗೊಂಡ ವಿಷಯಗಳನ್ನು ವಿದ್ಯುನ್ಮಾನ ನಮೂನೆ ಪ್ರಕಟಿಸುವುದು ಇಲ್ಲವೇ ಪ್ರಸರಣವಾಗಿ ಮಾಡುವುದಕ್ಕೆ ಶಿಕ್ಷೆಯ ಬಗ್ಗೆ ತಿಳಿಸಿರುತ್ತದೆ. ಕಾಂಗ್ರೆಸ್ ಪಕ್ಷವು ಕರ್ನಾಟಕ ಸರಕಾರವನ್ನು ನಡೆಸುವುದ ಮರೆತು ವಿರೋಧ ಪಕ್ಷದ ರೀತಿ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿದೆ.ಇದಕ್ಕಾಗಿಯೇ ಜೆಡಿಎಸ್ ಪಕ್ಷದ ವರಿಷ್ಠರು ಕ್ರಮಕೈಗೊಂಡಿದ್ದಾರೆ ಎಂದು ಹೇಳಿದರು.
    ಕಾಂಗ್ರೆಸ್ ಪಕ್ಷ ಅಧ್ಯಕ್ಷರಾದ ರಾಮನಗರದ ಶಾಸಕರವರನ್ನು ಇನ್ನು ಏಕೆ ಪಕ್ಷದಿಂದ ಉಚ್ಛಾಟನೆ ಮಾಡಿರುವುದಿಲ್ಲ? ಆದಷ್ಟು ಬೇಗ ಪಕ್ಷದಿಂದ ಉಚ್ಛಾಟನೆ ಮಾಡಿ ಅವರ ಮೇಲೆ ದೂರನ್ನು ಎಸ್.ಐ.ಟಿ.ಗೆ ನೀಡಬೇಕು ಎಂದು ಒತ್ತಾಯಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲೋಹಿತ್, ಕ್ಯಾಮಾನಹಳ್ಳಿ ರಂಜಿತ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts