More

    ರಸ್ತೆ ಮಧ್ಯೆ ಹಾಕಿದ್ದ ಜಲ್ಲಿ ರಾಶಿಗೆ ಬೈಕ್ ಡಿಕ್ಕಿ; ಸವಾರನಿಗೆ ಗಂಭೀರ ಗಾಯ

    ಸೊರಬ: ತಾಲೂಕಿನ ಅವಲಗೋಡು ಗ್ರಾಮದಲ್ಲಿ ಭಾನುವಾರ ರಾತ್ರಿ ರಸ್ತೆ ಮಧ್ಯೆ ಹಾಕಿದ್ದ ಜಲ್ಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡಿದ್ದಾನೆ. ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರ ರಸ್ತೆ ಮಧ್ಯದಲ್ಲಿಯೇ ಜಲ್ಲಿ ಬಿಟ್ಟ ಪರಿಣಾಮ ಅಪಘಾತ ಸಂಭವಿಸಿದೆ. ಭಾನುವಾರ ರಾತ್ರಿ ಸೊರಬ ಕಡೆಯಿಂದ ಸಾಗರ ಕಡೆ ಹೋಗುವ ಬೈಕ್ ಸವಾರನಿಗೆ ಜಲ್ಲಿ ರಾಶಿಯ ಕಾಣದೆ ಡಿಕ್ಕಿ ಹೊಡೆದು ಆಯಾತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಕ್ತಸ್ರಾವದಿಂದ ನೆರಳುವುದನ್ನು ಕಂಡ ಸ್ಥಳಿಯರು ರಾತ್ರಿ ಆಂಬುಲೆನ್ಸ್‌ಗೆ ಕರೆ ಮಾಡಿ ಸಾಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿದರು. ಬೈಕ್ ಸವಾರನಿಗೆ ಎದೆ ಕೈ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ.
    ರಸ್ತೆ ಮಧ್ಯದಲ್ಲಿ ಹಾಕಿದ್ದ ಜಲ್ಲಿ ಕಲ್ಲುಗಳೇ ಅಪಘಾತಕ್ಕೆ ಕಾಣ ಎಂದು ಆಕ್ರೋಶಗೊಂಡ ಸ್ಥಳೀಯರು ಸೊಮವಾರ ಬೆಳಗ್ಗೆ ಗುತ್ತಿದಾರ ಹಾಗೂ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು. ತಾಲೂಕಿನ ಸೊರಬ – ಸಾಗರ ರಸ್ತೆಯಲ್ಲಿ ಕಂದಕಗಳಂತೆ ಇರುವ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಅವಲಗೋಡು ಬಳಿ ಕಂದಕಗಳಂತೆ ರಸ್ತೆ ಗುಂಡಿ ನಿರ್ಮಾಣವಾಗಿದ್ದು ವಾಹನ ಸವಾರರು ನಿತ್ಯ ಸಂಚಾರದ ಸಂಕಷ್ಟ ಎದರಿಸುವಂತಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts