ಸೋಮವಾರಪೇಟೆ: ವಲಯ ಅರಣ್ಯಾಧಿಕಾರಿ ಕಚೇರಿ ವತಿಯಿಂದ ಐಗೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಅರಣ್ಯ ಮತ್ತು ವನ್ಯಜೀವಿಗಳು, ವಿವಿಧ ಜಾತಿಯ ಮರಗಳು, ಪ್ರಾಣಿ- ಪಕ್ಷಿಗಳು, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ನೀಡಲಾಗಿತ್ತು. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್, ಉಪವಲಯ ಅರಣ್ಯಾಧಿಕಾರಿಗಳಾದ ಜಗದೀಶ್, ಸತೀಶ್ ಕುಮಾರ್, ಭರಮಪ್ಪ, ಮುಖ್ಯಶಿಕ್ಷಕ ಯಶ್ವಂತ್ ಕುಮಾರ್, ಸಹಶಿಕ್ಷಕರು ಇದ್ದರು.