More

    ಯುವಕರಿಗೆ ಮಾರ್ಗದರ್ಶಕರಾಗಿದ್ದ ಧ್ರುವನಾರಾಯಣ

    ಸರಗೂರು: ರಾಜ್ಯ ಕಂಡಂತಹ ಅಪರೂಪದ ಸರಳ, ಸ್ನೇಹಜೀವಿ ಹಾಗೂ ಚಿಂತನ ಶೀಲ ರಾಜಕಾರಣಿಯಾಗಿದ್ದ ಆರ್. ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಕುರ್ಣೇಗಾಲ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕುರ್ಣೇಗಾಲ ಬೆಟ್ಟಸ್ವಾಮಿ ಹೇಳಿದರು.


    ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಣೇಗಾಲ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘಟನಾ ಶಕ್ತಿ ಹೊಂದಿದ್ದ ಧ್ರುವನಾರಾಯಣ ಅವರು ಯುವಕರಿಗೆ ಮಾರ್ಗದರ್ಶನ ಮಾಡಿ ಕ್ರಿಯಾಶೀಲವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು.

    ಶೋಷಿತರು, ದಮನಿತರು, ದಲಿತ ಮತ್ತು ಹಿಂದುಳಿದ ವರ್ಗಗಳ ಧ್ವನಿಯಾಗಿದ್ದ ಅವರು ರಾಜ್ಯದ ಒಬ್ಬ ಅತ್ಯುತ್ತಮ ರಾಜಕಾರಣಿಯಾಗಿದ್ದರು. ಅವರ ನಿಧನದಿಂದ ಪಕ್ಷ ಮತ್ತು ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.

    ಶಂಕರ, ಮಹದೇವಯ್ಯ, ದಾಸಯ್ಯ, ಸಿದ್ದಯ್ಯ, ಲತೀಫ್, ಚಿಕ್ಕಣ್ಣ, ರಾಜಶೇಖರ್, ಕೃಷ್ಣ, ಸುರೇಶ, ಗುರುಸಿದ್ಧ, ಸಿದ್ದು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts