More

    ಯತ್ನಾಳ್ ಆಲ್ ರೌಂಡರ್ ಬ್ಯಾಟ್ಸ್ ಮ್ಯಾನ್

    ಯಾದಗಿರಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

    ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ರು ಒಂದು ಬಾಲ್ ರಿವಸರ್್ ಸ್ವೀಪ್ ಹೊಡೆಯಬಹುದು ಇನ್ನು ಏನೋ ಹೊಡೆಯಬಹುದು. ಅವರು ಫ್ರೀ ಹ್ಯಾಂಡ್,ಲೆಫ್ಟ್ ಹಾಗೂ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಇದ್ದಂತೆ. ನಮ್ಮಂಥ ಸಣ್ಣವರು ಏನಾದರೂ ಹೇಳಿಕೆ ನೀಡಿದ್ದರೆ ಇಷ್ಟೊತ್ತಿಗಾಗಲೇ ದೊಡ್ಡ ರಂಪಾಟವೇ ಆಗುತ್ತಿತ್ತು. ಆದರೆ ಯತ್ನಾಳ್ ಅವರು ದೊಡ್ಡ ಕೂದಲು ಇರುವುವವರು ತುರುಬು ಹೇಗಾದರೂ ಕಟ್ಟಬಹುದು ಎಂದು ತಮ್ಮದೇ ಧಾಟಿಯಲ್ಲಿ ಟಾಂಗ್ ನೀಡಿದರು.

    ನಾನೊಬ್ಬ ಸಹೋದರನಾಗಿ ಬಸನಗೌಡ ಪಾಟೀಲ್ ಯತ್ನಾಳ್ರಿಗೆ ಸಲಹೆ ಕೊಡುತ್ತಿದ್ದು, ದಯವಿಟ್ಟು ಪಕ್ಷದ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡಬೇಡಿ. ಇದರಿಂದ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಆಗುತ್ತದೆ. ಕ್ಷೇತ್ರದ ಜನರಿಗಾಗಿ ಕರೋನಾ ಕಾಲಘಟ್ಟದಲ್ಲಿ ಏನೆಲ್ಲ ಮಾಡಿದ್ದೇವೆ. ಆದರೂ ಜನ ನಮ್ಮನ್ನು ಸೋಲಿಸಿದರು. ಇಂಥವರ ಕೆಲ ಹೇಳಿಕೆಗಳೇ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದರು.

    ಬರುವ ಲೋಕಸಭಾ ಚುನಾವಣೆಲ್ಲಿ ರಾಯಚೂರು ಕ್ಷೇತ್ರದಿಂದ ನಾನು ಸ್ಪಧರ್ಿಸಲು ಜನರು ಬಯಸಿದ್ದಾರೆ. ಈಗಾಗಲೇ ಸಂಸದ ರಾಜಾ ಅಮರೇಶ್ವರ ನಾಯಕ ಉತ್ತಮ ಕೆಲಸ ಮಾಡಿದ್ದಾರೆ. ನಾವೂ ಅಸಹ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ ನೀನೇ ಸ್ಪಧರ್ೆ ಮಾಡು ಎಂದರೆ, ಯೋಚನೆ ಮಾಡುವೆ ಎಂದು ಮಾಮರ್ಿಕವಾಗಿ ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts