More

    ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಕಲ ಕ್ರಮ

    ಯಾದಗಿರಿ: ವಿಧಾನಸಭಾ ಚುನಾವಣೆ ಮುಕ್ತ, ನ್ಯಾಯಸಮ್ಮತ, ಮತ್ತು ಪಾರದರ್ಶಕವಾಗಿ ನಡೆಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಕಾರಿಯೂ ಆದ ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.
    ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 9,99,959 ಮತದಾರರಿದ್ದು, ಇದರಲ್ಲಿ 4,98,648 ಮಹಿಳಾ, 5,01,254 ಪುರುಷ ಮತ್ತು 57 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದು, 1135 ಮತಗಟ್ಟೆಗಳನ್ನು ಸ್ಥಾಪಿಸಿ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಶೌಚಗೃಹ ರ್ಯಾಂಪ್, ಶಾಮಿಯಾನ, ಸರತಿ ಸಾಲಿನ ನಿರ್ವಹಣೆ ಕೋವಿಡ್-19 ಕಿಟ್ ಹಾಗೂ ಔಷ ಸೇರಿ ಇನ್ನಿತರ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಚುನಾವಣೆಗಾಗಿ ಈಗಾಗಲೆ ಅಕಾರಿಗಳ ತಂಡಗಳನ್ನು ರಚಿಸಿ, ಸಿಬ್ಬಂದಿ ನೇಮಿಸಲಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 56 ವಲ್ನರೇಬಲ್ ಮತಗಟ್ಟೆಗಳು ಹಾಗೂ 233 ಅತೀಸೂಕ್ಷ್ಮ ಮತಗಟ್ಟೆಗಳನ್ನು ಗುರಿತಿಸಲಾಗಿದೆ. ಅವಶ್ಯಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಅಕಾರಿ ಮತ್ತು ಸಿಬ್ಬಂದಿ, ಅಲ್ಲದೆ ಹೋಮ್ಗಾಡ್ರ್ಸ ಕೆಎಸ್ಆರ್ಪಿ, ಸಿಎಆರ್, ಡಿಎಆರ್ ತಂಡಗಳನ್ನು ಹಾಗೂ ಕೇಂದ್ರ ಪ್ಯಾರಾಮಿಲಟರಿ ಯೋಧರನ್ನು ಸಹ ನಿಯೋಜಿಸಲಾಗಿದೆ ಎಂದರು.
    ಮಾದರಿ ನೀತಿ ಸಂಹಿತೆ ನಿರ್ವಹಣೆಗಾಗಿ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 45 ಕ್ಷಿಪ್ರ ಸಂಚಾರಿ ತಂಡಗಳು, 57 ಸ್ಥಾಯಿ ಕಣ್ಗಾವಲು ತಂಡಗಳು, 4 ವಿಡಿಯೋ ವೀವಿಂಗ್ ತಂಡಗಳು ಹಾಗೂ 14 ವಿಡಿಯೋ ಸವರ್ೇಲನ್ಸ್ ತಂಡಗಳನ್ನು ನೇಮಿಸಲಾಗಿದೆ. ಪ್ರತಿದಿನ ವಿವಿಧ ಅಕ್ರಮ ವಸ್ತುಗಳ ಸರಬರಾಜು ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.
    ಅಕ್ರಮ ಹಣ ಸಾಗಣೆ, ಮದ್ಯ, ಬೆಲೆ ಬಾಳುವ ವಸ್ತುಗಳು ಹಾಗೂ ಇನ್ನಿತರ ಆಮೀಷ ವಸ್ತುಗಳ ವಶಕ್ಕೆ ಪಡೆಯುವ ಹಾಗೂ ಪ್ರಕರಣ ದಾಖಲಿಸುವ ಬಗ್ಗೆ ವಿವಿಧ ಇಲಾಖೆಯಿಂದ ವರದಿ ಪಡೆಯಲಾಗುತ್ತಿದೆ. ಮಹಿಳೆಯರಿಂದ ನಿರ್ವಹಣೆ ಮಾಡುವ ಪಿಂಕ್ ಮತಗಟ್ಟೆಗಳು, ಮಾದರಿ ಹಾಗೂ ಎಥನಿಕ್, ವಿಕಲಚೇತನರು ಮತ್ತು ಯುವ ಮತದಾರರ ಮತದಾನ ಕೇಂದ್ರಗಳ ಸಹ ಸ್ಥಾಪಿಸಲಾಗಿದೆ. ಕಡಿಮೆ ಮತದಾನ ಇರುವ ಕಡೆ ಸ್ವೀಪ್ ಚಟುವಟಿಕೆ ಪರಿಣಾಮಕಾರಿಯಾಗಿ ಹಮ್ಮಿಕೊಂಡಿದೆ. ಕ್ರಿಟಿಕಲ್ ಮತ್ತು ವಲ್ನರೇಬಲ್ ಮತಕಟ್ಟೆಗಳಲ್ಲಿ ಹಾಗೂ ಒಂದೇ ಮತಗಟ್ಟೆ ಹಾಗೂ ನಾಲ್ಕರಿಂದ ಐದು ಮತಗಟ್ಟೆ ಇರುವ ಕ್ಲಸ್ಟರ್ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
    ಜಿಪಂ ಸಿಇಒ ಗರಿಮಾ ಪನ್ವಾರ್, ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಕಡಿಮೆ ಮತದಾನವಾಗಿರುವ ಕಡೆಗಳಲ್ಲಿ ಸೂಕ್ತ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ, ಚುನಾವಣಾ ಅಕ್ರಮ ತಡೆಗೆ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ವಿವಿಧ ಕಡೆಗಳಲ್ಲಿ ಪ್ರಕರಣಗಳ ಸಹ ದಾಖಲಿಸಲಾಗಿದೆ ಎಂದರು.
    ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಚುನಾವಣಾ ತಹಸೀಲ್ದಾರ್ ಸಂತೋಷಿ ರಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts