ಬಾಗಲಕೋಟೆ: ಭಾರತೀಯ ಜನತಾ ಪಾರ್ಟಿಯು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಗಾಣಿಗ ಸಮಾಜ ಒತ್ತಾಯಿಸಿದೆ ಎಂದು ಸಮಾಜ ಮುಖಂಡ ಪ್ರಕಾಶ ಅಂತರಗೊಂಡ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡು ಗಾಣಿಗ ಸಮಾಜದ ಮತಗಳು ಬಿಜೆಪಿಯತ್ತ ವಾಲಲು ಪ್ರಮುಖ ಕಾರಣಿಕರ್ತರಾಗಿದ್ದಾರೆ. ಹೀಗಾಗಿ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ವಿಧಾನ ಪರಿಷತ ಟಿಕೆಟ್ ನೀಡಬೇಕು ಎಂದರು.
![](https://cdn.vvimgs.com/wp-content/uploads/2024/06/ABHUDAYA-WEB-01.jpg)
ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲು ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಮುಖಂಡರಾದ ಬಿ.ಎಫ್.ಹೊರಕೇರಿ, ಎಂ.ಪಿ.ಗಾಣಗೇರ, ಮಲ್ಲಣ್ಣ ನಾಡಗೌಡ, ಶಿವಪುತ್ರಪ್ಪ ಮತ್ತಿತರರು ಇದ್ದರು.